Categories
ನ್ಯಾಯಾಂಗ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಎನ್. ನಂಜುಂಡ ರೆಡ್ಡಿ

ನ್ಯಾಯಾಂಗದಲ್ಲಿ ಸಮಾಜಪರ ನಿಲುವುಗಳಿಂದ ವಿಶಿಷ್ಟ ಛಾಪೊತ್ತಿದವರು ನಂಜುಂಡರೆಡ್ಡಿ, ನಾಲ್ಕು ದಶಕಗಳಿಂದಲೂ ಕಕ್ಷಿದಾರರ ಹಿತ ಕಾಯುತ್ತಿರುವ ನ್ಯಾಯವಾದಿ, ನ್ಯಾಯಾಂಗ ವಲಯದಲ್ಲಿ ನಂಜುಂಡರೆಡ್ಡಿ ಅವರದ್ದು ಬಲು ಜನಪ್ರಿಯ ಹೆಸರು. ಅಸೀಮ ವೃತ್ತಿಪರತೆ, ಜ್ಞಾನ ನಂಜುಂಡರೆಡ್ಡಿ ಅವರ ವಿಶೇಷತೆ, ಕ್ಲಿಷ್ಟಕರವಾದ ಪ್ರಕರಣಗಳಲ್ಲಿ ಅತ್ಯಂತ ಜಾಣ್ಮೆಯಿಂದ ವಾದಿಸಿ ಕಕ್ಷಿದಾರರಿಗೆ ಗೆಲುವನ್ನು ತಂದುಕೊಡುವಲ್ಲಿ ಅವರು ಸದಾ ಯಶಸ್ವಿ. ಸಮಾಜದ ಉನ್ನತಿಗೆ ಶ್ರಮಿಸುವುದೇ ಬದುಕಿನ ಮೂಲಧ್ಯೇಯ. ವಕೀಲವಲಯಲ್ಲಿ ಹಣಕ್ಕಿಂತಲೂ ಸಮಾಜಮುಖಿತ್ವ ಮುಖ್ಯವೆಂಬ ದಿವ್ಯ ನಂಬಿಕೆಯಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಹಲವಾರು ಪ್ರಕರಣಗಳಲ್ಲಿ ವಾದಿಸಿ ಮಂಡಿಸಿದವರು. ಬಿಬಿಎಂಪಿ ಮತ್ತು ಬಿಡಿಎಯಿಂದ ಕೈತಪ್ಪುವಂತಿದ್ದ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ನೂರಾರು ಎಕರೆ ಭೂಮಿಯನ್ನು ಮರಳಿ ವಾಪಸ್‌ ಪಡೆದುಕೊಟ್ಟ ಅಪೂರ್ವ ಸಾಧನೆ-ಸೇವೆ. ನಂಜುಂಡರೆಡ್ಡಿ ಅವರ ಈ ವೃತ್ತಿಕುಶಲತೆಯಿಂದಾಗಿ ಸರ್ಕಾರಕ್ಕೆ ಪರೋಕ್ಷವಾಗಿ ಜನತೆಗೆ ಆದ ಲಾಭ ಅಗಣಿತ. ವೃತ್ತಿಪರತೆ ಮತ್ತು ವೃತ್ತಿಬದ್ಧತೆಗಳ ಮಹಾಸಂಗಮದಂತಿರುವ ನಂಜುಂಡರೆಡ್ಡಿ ನ್ಯಾಯಾಂಗದಲ್ಲಿ ಕಂಡುಬರುವ ಅಪರೂಪದ ಸಮಾಜಪರ ನ್ಯಾಯವಾದಿ.