Categories
ಚಿತ್ರಕಲೆ ರಾಜ್ಯೋತ್ಸವ 2020

ಎಂ.ಜಿ. ವಾಚೀದ ಮಠ

ದೃಶ್ಯಕಲೆಯನ್ನೇ ಬದುಕು-ಸಾಧನೆಯ ನೆಲೆಯಾಗಿಸಿಕೊಂಡ ಎಂ.ಜಿ.ವಾಚೀದ ಮಠ ನಾಡು ಕಂಡ ವಿಶಿಷ್ಟ ರೇಖಾಚಿತ್ರ ಕಲಾವಿದ, ಕಲಾಶಿಕ್ಷಕ ಮತ್ತು ಕಲಾಗುರು.
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಕೊಗನೂರ ಗ್ರಾಮದ ಎಂ.ಜಿ.ವಾಚೀದ ಮಠ ಬಾಲ್ಯದಲ್ಲೇ ಚಿತ್ರಕಲೆಯೆಡೆಗೆ ಆಕರ್ಷಿತಗೊಂಡವರು. ಮುಂಬಯಿನ ಡ್ರಾಯಿಂಗ್ ಶಿಕ್ಷಕರ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಬಹುಮಾನ ಪಡೆದವರು. ವೃತ್ತಿ-ಪ್ರವೃತ್ತಿ ಎರಡೂ ಕಲೆಯೇ. ಕಲಾಶಿಕ್ಷಕರಾಗಿ ಮುಂಬಯಿ, ಸವದತ್ತಿ, ಧಾರವಾಡದಲ್ಲಿ ೩೭ ವರ್ಷಗಳ ಸುದೀರ್ಘ ಸೇವೆ. ವಿದ್ಯಾರ್ಥಿಗಳ ನೆಚ್ಚಿನ ಕಲಾಗುರು, ಸನ್ನಿವೇಶಕ್ಕನುಗುಣವಾಗಿ ಕೃತಿ ರಚಿಸುವ ವಿಶಿಷ್ಟ ಕಲೆಗಾರಿಕೆ, ಸರ್ಕಾರಿ ಪಠ್ಯಪುಸ್ತಕಗಳಿಗೆ ದಶಕಗಳ ಕಾಲ ಚಿತ್ರಗಳನ್ನು ರಚಿಸಿದ ಹೆಮ್ಮೆಯ ಕಲಾವಿದ. ಸಾವಿರಾರು ರೇಖಾಚಿತ್ರಗಳು, ಸಂಯೋಜನೆ ಮತ್ತು ಭಾವಚಿತ್ರಗಳನ್ನು ಕಣ್ಣಿಗೆ ಕಣ್ಣುವಂತೆ ರಚಿಸಿದ ಹಿರಿಮೆ. ಮಕ್ಕಳಿಗೆ ತರಬೇತಿ ನೀಡಿ ಅವರು ರಚಿಸಿದ ಕಲಾಕೃತಿಗಳನ್ನು ಸಭೆ-ಸಮಾರಂಭಗಳಲ್ಲಿ ಪ್ರದರ್ಶಿಸಿ ಕಲಾವಿದರ ರೂಪಿಸಿದ ಮಾರ್ಗದರ್ಶಿ, ೮೬ರ ಹರೆಯದಲ್ಲೂ ರೇಖೆಗಳ ಜೊತೆಗೆ ಒಡನಾಡುವ ಕಲಾಕಾರರು.