Categories
ಚಲನಚಿತ್ರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎ.ಟಿ. ರಘು

ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರನಿರ್ದೇಶಕರಲ್ಲಿ ಎ.ಟಿ. ರಘು ಸಹ ಒಬ್ಬರು. ೨೫ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ, ಉತ್ತಮ ಯಶಸ್ಸಿನ ಗರಿಮೆ ಅವರದ್ದು.
ಕನ್ನಡ ಚಿತ್ರಲೋಕಕ್ಕೆ ಕೊಡಗಿನ ಕೊಡುಗೆ ಎ.ಟಿ. ರಘು. ಕೊಡವ ಜನಾಂಗದವರಾದ ರಘು ಅವರಿಗೆ ಬಾಲ್ಯದಿಂದಲೇ ಸಿನಿಮಾಸಕ್ತಿ. ಚಿತ್ರನಿರ್ದೇಶಕನಾಗುವ ಹೊಂಗನಸು ಹೊತ್ತು ಗಾಂಧಿನಗರಕ್ಕೆ ಬಂದು ಬಹಳ ವರ್ಷಗಳ ಬಳಿಕ ಸ್ವತಂತ್ರ ನಿರ್ದೇಶಕರಾದರು. ೧೯೮೦ರಲ್ಲಿ ತೆರೆಕಂಡ ನ್ಯಾಯ ನೀತಿ ಧರ್ಮ ರಘು ನಿರ್ದೇಶನದ ಚೊಚ್ಚಲ ಚಿತ್ರ ರೆಬೆಲ್ ಸ್ಟಾರ್ ಅಂಬರೀಷ್ ನಾಯಕ, ಶಂಕರ್ ಸುಂದರ್, ಆಶಾ, ಅವಳ ನೆರಳು. ಧರ್ಮಯುದ್ಧ, ಗೂಂಡಾಗುರು. ಗುರು ಜಗದ್ಗುರು, ಪ್ರೀತಿ, ಕಾಡಿನ ರಾಜ, ಮಿಡಿದ ಹೃದಯಗಳು, ನ್ಯಾಯಕ್ಕಾಗಿ ನಾನು, ಮಂಡ್ಯದ ಗಂಡು ಮುಂತಾದ ೨೬ ಚಿತ್ರಗಳ ನಿರ್ದೇಶನ. ಬಹುತೇಕ ಚಿತ್ರಗಳಲ್ಲಿ ಅಂಬರೀಷ್ ಅವರೇ ನಾಯಕನಟ. ಗಲ್ಲಾಪೆಟ್ಟಿಗೆಯಲ್ಲಿ ರಘು ಚಿತ್ರಗಳು ಹಣ ಸೂರೆಗೊಂಡಿದ್ದರಿಂದ ಜಯಶೀಲ ನಿರ್ದೇಶಕರೆಂದೇ ಖ್ಯಾತಿ ಪಡೆದವರು. ಚಿತ್ರ ನಿರ್ಮಾಪಕರಾಗಿ ನಷ್ಟ ಅನುಭವಿಸಿದ ರಘು ಚಿತ್ರರಂಗದಿಂದ ಹಿಂಬದಿಗೆ ಸರಿದಿದ್ದರೂ ಅವರ ಚಿತ್ರಗಳಿಗೆ ಮಾತ್ರ ಅದೇ ಜನಪ್ರಿಯತೆ.