Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಎಂ.ಬಿ.ದೇಸಾಯಿ

ಎಂ.ಬಿ.ದೇಸಾಯಿ ಅವರು ಗಡಿನಾಡ ಪ್ರದೇಶದಲ್ಲಿ ಕನ್ನಡದ ಪತ್ರಿಕೆಗಳನ್ನು ಯಶಸ್ವಿಯಾಗಿ ನಡೆಸಿದವರು. ಬೆಳಗಾವಿಯ ಲೋಕದರ್ಶನ ಪತ್ರಿಕೆಯ ಮೂಲಕ ಜಿಲ್ಲೆಯ ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸುವ ಕೆಲಸವನ್ನು ದೇಸಾಯಿಯವರು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ. ಸಮಾಜದ ಆಗುಹೋಗುಗಳನ್ನು ಆಡಳಿತ ಗಾರರ ಹಾಗೂ ಅಧಿಕಾರಸ್ಥರ ಗಮನಕ್ಕೆ ಸಮರ್ಥವಾಗಿ ತರುವ ಪ್ರಯತ್ನವನ್ನು ತಮ್ಮ ಪತ್ರಿಕೆಯ ಮೂಲಕ ಎಂ.ಬಿ.ದೇಸಾಯಿ ಅವರು ಮಾಡುತ್ತಿದ್ದಾರೆ.