Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಬೆಜವಾಡ ಏಲ್ಲನ್

ಮಲ ಹೊರುವ ಕುಲಕಸುಬಾಗಿದ್ದ ಕುಟುಂಬದಿಂದ ಬೆಳೆದು ಬಂದ ಕೆ.ಜಿ.ಎಫ್.ನ ಬೆಜವಾಡ ವಿಲ್ಸನ್ ಇಂತಹ ಅಮಾನವೀಯ ಪದ್ಧತಿಯ ನಿಷೇಧಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ನಡೆಸಿ ಒಣ ಶೌಚಾಲಯಗಳ ನಿಷೇಧಕ್ಕೆ ಶ್ರಮಿಸಿದವರು.
೧೯೯೩ರಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶ ಅನುಷ್ಠಾನಕ್ಕೆ ೨೦೦೩ರಲ್ಲಿ ಸರ್ಮೋಚ್ಛ ನ್ಯಾಯಾಲಯದಲ್ಲಿ ಹೋರಾಡಿ ಮಲ ಹೊರುವ ಪದ್ಧತಿಗೆ ಶಾಶ್ವತ ವಿಮೋಚನೆ ಒದಗಿಸಿದವರು. ಇವರ ಮಾನವೀಯ ಹೋರಾಟವನ್ನು ಗುರುತಿಸಿ ಪ್ರತಿಷ್ಠಿತ ರೇಮನ್ ಮ್ಯಾಗೆಸೆಸ್ಸೆ ಪ್ರಶಸ್ತಿ ಗೌರವವನ್ನು ನೀಡಿ ಗೌರವಿಸಿದೆ.