Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಲ್.ಶೇಖರ ನಾಯಕ್

ಭಾರತೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಲ್.ಶೇಖರ ನಾಯಕ್ ಅವರು ಅಂತರರಾಷ್ಟ್ರೀಯ ಟಿ-೨೦ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಪದ್ಮಶ್ರೀ ಪುರಸ್ಕೃತರಾದ ಶೇಖರ ನಾಯಕ್ ಬಡರೈತನ ಮಗನಾಗಿ ಜನಿಸಿದ ಹುಟ್ಟು ಅಂಧರು. ಅಂಧ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೇ ಕ್ರಿಕೆಟ್ ಕಲಿತ ಶೇಖರನಾಯಕ್ ಕರ್ನಾಟಕ ರಾಜ್ಯ ಅಂಧ ಕ್ರಿಕೆಟ್ ಆಟಗಾರರಾಗಿ, ನಾಯಕರಾಗಿ, ಹೆಸರುವಾಸಿಯಾದವರು.

ಭಾರತ ತಂಡದ ಅಂಧ ಕ್ರಿಕೆಟ್ ಕ್ಯಾಪ್ಟನ್ ಆಗಿ ವಿಶ್ವಕಪ್ ಅಂಧ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ಬಾರಿ ಗೆದ್ದುಕೊಟ್ಟ ಶೇಖರನಾಯಕ್ ಅವರಿಗೆ ಭಾರತ ಸರ್ಕಾರ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಗೌರವ ಸನ್ಮಾನಗಳು ಲಭಿಸಿವೆ.