Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಹೆಚ್.ಬಿ. ನಂಜೇಗೌಡ

ಕರ್ನಾಟಕದ ವಾಲಿಬಾಲ್ ‘ಮಾರ್ಗನ್’ ಎಂದೇ ಹೆಸರುವಾಸಿಯಾದವರು ಹೆಚ್.ಬಿ. ನಂಜೇಗೌಡ, ರಾಷ್ಟ್ರಮಟ್ಟದಲ್ಲಿ ಕರುನಾಡಿನ ಕೀರ್ತಿ ಬೆಳಗಿದ ಗ್ರಾಮೀಣ ಕ್ರೀಡಾ ಪ್ರತಿಭೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಪುರದ ಹೊಸಹಳ್ಳಿಯ ರೈತ ಕುಟುಂಬದವರಾದ ನಂಜೇಗೌಡರಿಗೆ ಬಾಲ್ಯದಿಂದಲೂ ವಾಲಿಬಾಲ್ ಆಟವೆಂದರೆ ಪಂಚಪ್ರಾಣ. ಬಿ.ಎ., ಬಿ.ಪಿ.ಇಡಿ., ಡಿಪ್ಲೋಮಾ ಇನ್ ಕೋಚಿಂಗ್ನಲ್ಲಿ ವ್ಯಾಸಂಗ, 70ರ ದಶಕದಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿರುವಾಗಲೇ ವಾಲಿಬಾಲ್ ಪಟುವಾಗಿ ರೂಪಾಂತರ. ಕಾಲೇಜು ತಂಡದ ಆಟಗಾರನಾಗಿ ಗಮನಸೆಳೆಯುವಿಕೆ. ಹಲವು ರಾಜ್ಯ-ಅಂತಾರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರತಿಭಾ ಪ್ರದರ್ಶನ. ಅನಂತರ ತರಬೇತುದಾರರಾಗಿ ಮಾರ್ಪಾಡು, ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ತರಬೇತುದಾರ, ತೀರ್ಪುಗಾರರಾಗಿ ಅನನ್ಯ ಸೇವೆ. ಹಳ್ಳಿಮಟ್ಟದಿಂದಿಡಿದು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಅದ್ಭುತ ಕ್ರೀಡಾಸಂಘಟನಕಾರರೆಂಬ ಅಚ್ಚಳಿಯದ ಹೆಗ್ಗಳಿಕೆ. ವಾಲಿಬಾಲ್ ಆಟದ ಜ್ಞಾನವನ್ನು ಹಳ್ಳಿಪ್ರತಿಭೆಗಳಿಗೆ ಹಂಚಿದ ‘ಆಚಾರ್ಯ’ರು. ಹತ್ತಾರು ಪ್ರಶಸ್ತಿ-ಗೌರವಗಳಿಂದ ಭೂಷಿತರು.