Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ವಿದ್ಯಾಸಿಂಹಾಚಾರ್ಯ ಮಾಹುಲಿ

ಮುಂಬಯಿಯಲ್ಲಿ ಸನಾತನ ವೈದಿಕ ಸಂಸ್ಕೃತಿ ಉಳಿವಿಗೆ ಅಹರ್ನಿಶಿ ಶ್ರಮಿಸುತ್ತಿರುವ ಮಹಾಗುರು, ಘನ ವಿದ್ವಾಂಸರು ಪಂಡಿತ್ ವಿದ್ಯಾಸಿಂಹಾಚಾರ್ಯ ಮಾಹುಲಿ. ಹರಿದಾಸ ಸಾಹಿತ್ಯದ ಪ್ರಚಾರಕರು, ಹೊರನಾಡಿನ ಕನ್ನಡದ ಕಟ್ಟಾಳು.
ಮುಂಬಯಿನ ಮಾಳುಂದದಲ್ಲಿ ಮಾಳುಂದದಲ್ಲಿ ಮಧ್ವಸಿದ್ಧಾಂತದ ವಾಣಿ ವಿಹಾರ ಸಿದ್ಧಪಡಿಸಿದ ಮಾಹುಲಿ ಗೋಪಾಲಾಚಾರ್ಯರ ಸುಪುತ್ರರಾದ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ಬಾಲ್ಯದಲ್ಲೇ ಶಾಸ್ತ್ರಪಾರಂಗತರು. ತಂದೆ ಕಟ್ಟಿದ ಮಹಾವಿದ್ಯಾಲಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾಗಿ ಅನನ್ಯ ಸೇವೆ. ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನವಸ್ತ್ರದಾನ, ಆಶ್ರಯ ನೀಡಿ ೧೪ ವರ್ಷ ವಿದ್ಯಾದಾನ ಮಾಡುವಲ್ಲಿ ಸದಾ ನಿರತರು. ಪಂಡಿತರನ್ನು ರೂಪಿಸಿದ ಪಂಡಿತೋತ್ತಮರು. ಮುಂಬಯಿ ನೆಲೆದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸಿದ ಅಗ್ರಗಣ್ಯ ಆಚಾರ್ಯರು, ಹರಿದಾಸ ಸಾಹಿತ್ಯದಲ್ಲಿ ಅಪಾರ ವಿದ್ವತ್ತು, ಸಿಡಿಗಳ ಮೂಲಕ ಹರಿಭಕ್ತಿಸಾರವನ್ನು ಪ್ರಚುರಪಡಿಸಿದ ಮಹನೀಯರು. ನಾನಾ ನಗರಗಳಿಗೆ ತೆರಳಿ ಜ್ಞಾನಸತ್ರ ನಡೆಸುವ ಅಪ್ಪಟ ಕನ್ನಡಪ್ರೇಮಿ, ಪಂಡಿತ ಪರಂಪರೆ ನಿರ್ಮಾಣಕ್ಕೆ ಬದುಕು ಮೀಸಲಿಟ್ಟಿರುವ ಕರ್ಮಯೋಗಿ.