Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್. ಸಯ್ಯದ್ ಅಹಮದ್

ಶತಮಾನದ ಅಂಚಿನಲ್ಲಿರುವ ಎಸ್.ಸಯ್ಯದ್ ಅಹಮದ್ ಅವರು ಅಲ್ಲಮ, ಇಟ್ಬಾಲ್ ಮಹಾಕವಿಗಳ ಬಗೆಗೆ ಆಳವಾದ ಅಭ್ಯಾಸ ಮಾಡಿರುವ ಅನೇಕ ಕೃತಿಗಳನ್ನು ರಚಿಸಿರುವ ಹಿರಿಯರು.

ಆಧ್ಯಾತ್ಮ, ತತ್ವಜ್ಞಾನ ಮತ್ತು ಅನುಭಾವ ಸಾಹಿತ್ಯಕ್ಕೆ ಸೇರಿದ ಹದಿನೆಂಟಕ್ಕೂ ಹೆಚ್ಚು ಪರ್ಷಿಯನ್ ಗ್ರಂಥಗಳನ್ನು ಉರ್ದು ಭಾಷೆಗೆ ಅನುವಾದ ಮಾಡಿ ಓದುಗರಿಗೆ ಸುಲಭ ದರದಲ್ಲಿ ದೊರೆಯುವಂತೆ ಮಾಡಿದ ಹೆಗ್ಗಳಿಕೆ ಇವರದು.

ಕಾಶ್ಮೀರಿ ವಿಶ್ವವಿದ್ಯಾಲಯ ಹಾಗೂ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಭಾಷಾ ಪಾಂಡಿತ್ಯದ ಬಗ್ಗೆ ಪ್ರಶಂಸೆ ಪಡೆದಿರುವ ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿಗಳಾದ ಸಯ್ಯದ್ ಅಹಮದ್ ಅವರು ಅಲ್ಲಮನ ತತ್ವಜ್ಞಾನದ ಬಗ್ಗೆ ಅಗಾಧವಾದ ಪಾಂಡಿತ್ಯವುಳ್ಳವರು.