Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎ.ಸಿ.ರಾಜಶೇಖರ್

ಭಾಷಾಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಅಟ್ಟೂರು ರಾಜಶೇಖರ ಅವರು ಪತ್ರಿಕೋದ್ಯಮ ಪ್ರವೇಶ ಮಾಡಿದ್ದು ಪ್ರಜಾವಾಣಿ ದೈನಿಕದ ಮೂಲಕ. ಎರಡೂವರೆ ದಶಕಗಳಿಗೂ ಹೆಚ್ಚು ಸಮಯ ಪ್ರಜಾವಾಣಿಯ ಸಂಪಾದಕೀಯ ವರ್ಗದಲ್ಲಿ ಕಾರ್ಯ ನಿರ್ವಹಿಸಿದ ರಾಜಶೇಖರ್ ಅವರು ಸಹಾಯಕ ಸಂಪಾದಕರಾಗಿಯೂ ಕೆಲಸ ಮಾಡಿದವರು.

ಮುದ್ರಣ ಮಾಧ್ಯಮದಿಂದ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶ ಮಾಡಿದ ಅಬ್ಬರು ರಾಜಶೇಖ‌ ಅವರು ಕಸ್ತೂರಿ ವಾಹಿನಿಯ ಸುದ್ದಿ ಹಾಗೂ ಸಂವಾದ ಮಾಧ್ಯಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟಾರೆ ಮುವ್ವತ್ತೂರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿರುವ ರಾಜಶೇಖರ್ ಪ್ರಸ್ತುತ ರಾಮನಗರದ ಆರಂಭ ಕನ್ನಡ ದೈನಿಕದ ಸಂಪಾದಕರು.

ರಾಜಶೇಖರ ಅವರಿಗೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಮಂಗಳ ಎಂ.ಸಿ ವರ್ಗೀಸ್ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.