Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಎಂ.ಎನ್. ಷಡಕ್ಷರಿ

ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸೇವೆಗೈದ ಸಾರ್ಥಕ ಜೀವಿ ಎಂ.ಎನ್. ಷಡಕ್ಷರಿ. ಶಾಲಾ ಸಂಸ್ಥಾಪಕ, ಪ್ರಾಚಾರ್ಯ, ಸೌಟ್ಸ್ ಶಿಕ್ಷಕ, ಬರಹಗಾರ, ಶಿಕ್ಷಣ ತಜ್ಞರಾಗಿ ಅವರದ್ದು ಅನುಪಮ ಸೇವೆ.
ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ತವರುನೆಲ. ೧೯೪೭ರಲ್ಲಿ ಜನನ. ಬಿ.ಎಸ್ಸಿ, ಬಿಇಡಿ ಪದವೀಧರರು. ಚಿಕ್ಕಮಗಳೂರಿನ ಮೌಂಟೆನ್ ವಿದ್ಯಾಲಯದಲ್ಲಿ ೨೩ ವರ್ಷಗಳ ಶಿಕ್ಷಕ ಸೇವೆ. ಸೈಟ್ಸ್ ಶಿಕ್ಷಕರಾಗಿಯೂ ವಿಶಿಷ್ಟ ಛಾಪು. ನೂರಾರು ಮಕ್ಕಳನ್ನು ಸೈಟ್ಸ್ನಲ್ಲಿ ರಾಷ್ಟ್ರಪತಿ ಪುರಸ್ಕಾರಕ್ಕೆ ಅರ್ಹರನ್ನಾಗಿಸಿದ ಅಚ್ಚಳಿಯದ ಹೆಗ್ಗಳಿಕೆ. ಉಪ್ಪಳಿಯ ಮಾಡೆಲ್ ಇಂಗ್ಲಿಷ್ ಶಾಲೆಯ ಸಂಸ್ಥಾಪಕ-ಪ್ರಾಚಾರ್ಯರಾಗಿ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಮಹತ್ತರ ಕೊಡುಗೆ. ಸೌಟ್ಸ್ ಮತ್ತು ಗೈಡ್ಸ್ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಸಿಲ್ವರ್ಸ್ಟಾರ್ ಪುರಸ್ಕಾರ ಪಡೆದ ವಿಶೇಷ ವ್ಯಕ್ತಿ. ಅಂಚೆ ಚೀಟಿ, ನಾಟ್ಯ, ಶಂಖ, ಚಿಪ್ಪು ಸಂಗ್ರಹ ನೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ಲೇಖನಗಳನ್ನು ಬರೆದ ಬರಹಗಾರ. ಗ್ರೀನ್ ಟೀಚರ್ ರಾಷ್ಟ್ರೀಯ ಪುರಸ್ಕಾರ, ಜಿಲ್ಲಾ ವಿಜ್ಞಾನ ಪ್ರಶಸ್ತಿ, ಪರಿಸರ ಶಿಕ್ಷಣ ಪ್ರಶಸ್ತಿ ಮೊದಲಾದ ಪುರಸ್ಕಾರಗಳಿಗೆ ಪಾತ್ರರು.