Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಂ.ಜಿ. ಈಶ್ವರಪ್ಪ

ಶಿಕ್ಷಣ, ರಂಗಭೂಮಿ ಮತ್ತು ಜನಪದ ಕ್ಷೇತ್ರದ ಸಾಧಕಮಣಿ ಡಾ. ಎಂ.ಜಿ. ಈಶ್ವರಪ್ಪ, ಶಿಕ್ಷಣ ತಜ್ಞ ಸಂಶೋಧಕ, ಲೇಖಕ, ಅಧ್ಯಾಪಕರಾಗಿ ಅವರದ್ದು ಪರಿಪಕ್ವ ಸಾಧನೆ.
ಬಯಲುಸೀಮೆ ದಾವಣಗೆರೆಯ ಎಂ.ಜಿ. ಈಶ್ವರಪ್ಪ ಸ್ನಾತಕೋತ್ತರ ಪದವೀಧರರು. ಮೈಸೂರು ವಿವಿಯಿಂದ ಪಿ.ಎಚ್ಡಿ ಪಡೆದವರು. ೩೮ ವರ್ಷಗಳ ಸಾರ್ಥಕ ಅಧ್ಯಾಪಕ ವೃತ್ತಿ. ಬೋಧನೆಯಲ್ಲಿ ಅಮಿತಾನಂದ ಕಂಡುಕೊಂಡ ಗುರುವರ್ಯ. ಜನಪದ ಸಂಶೋಧನೆ, ರಂಗನಿರ್ದೇಶನ, ಉಪನ್ಯಾಸ, ಬರವಣಿಗೆಯಲ್ಲಿ ಅಪರಿಮಿತ ಕೃಷಿ, ಜಾತ್ರೆ, ಸಾಯೋಆಟ, ಕಡೇಮನೆ ಕಡೇ ಗಲ್ಲಿ, ಹಳ್ಳಿಮೇಷ್ಟ್ರು ಮತ್ತಿತರ ನಾಟಕಗಳ ನಿರ್ದೇಶನ, ಜನಪದ ರಂಗಭೂಮಿ ಕುರಿತು ಅನೇಕ ಉಪನ್ಯಾಸ ನೀಡಿದ ಪ್ರಖರ ವಾಗ್ನಿ, ಚಿಂತಕ, ಮ್ಯಾಸಬೇಡರು, ಬೇಸಾಯ ಪದ್ಧತಿ, ಬಂಗಾರ ಕೊದಲಜೈರಾನಿ ಮತ್ತಿತರ ೧೬ ಕೃತಿಗಳ ಲೇಖಕರು. ಮೈಸೂರು ವಿವಿ ಸೆನೆಟ್ ಸದಸ್ಯ, ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ, ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಕುವೆಂಪು ವಿವಿ ಶಿಕ್ಷಣ ಮಂಡಳಿ ಸದಸ್ಯರಾಗಿ ಅನನ್ಯ ಶೈಕ್ಷಣಿಕ ಸೇವೆ. ಜನಪದ ತಜ್ಞ ಮಹಾಲಿಂಗ ರಂಗಪ್ರಶಸ್ತಿ ಮುಂತಾದ ಗೌರವಗಳಿಗೆ ಭಾಜನರಾದ ಚಿಂತಕರು-ಹೆಮ್ಮೆಯ ಸಾಧಕರು.