Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕುಸುಮಾ ಶಾನಭಾಗ್

ಕನ್ನಡದ ಪ್ರಸಿದ್ಧ ಬರಹಗಾರರಾದ ಭಾರತೀಸುತ ಅವರ ಪುತ್ರಿ ಕುಸುಮಾ ಶಾನಭಾಗ್ ಅವರು ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ವರದಿಗಳನ್ನು ನೀಡಿದ್ದಾರೆ.

ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸುಮಾರು ಮೂರುದಶಕಗಳ ಕಾಲ ಕಾರ್ಯ ನಿರ್ವಹಿಸಿದ ಕುಸುಮಾ ಶಾನಭಾಗ್ ಅವರು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

ಸಮಾಜದ ಎಲ್ಲ ಸ್ಥರದ ಜನತೆಯ ನೋವು ನಲಿವುಗಳನ್ನು ಪತ್ರಿಕೆಗಳಲ್ಲಿ ಪ್ರತಿಬಿಂಬಿಸಿದ ಮಹಿಳಾ ಪತ್ರಕರ್ತರಲ್ಲಿ ಕುಸುಮಾ ಪ್ರಮುಖರು. ಅವರ ‘ಕಾಯದ ಕಾರ್ಪಣ್ಯ’ ಕೃತಿಯು ಅತ್ಯಂತ ವಿಶಿಷ್ಟವಾದ ಕೃತಿ.

ಮಹಿಳಾಪರ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸಿದ್ಧಪಡಿಸಿದ ಕುಸುಮಾ ಅವರಿಗೆ ಅನೇಕ ವೃತ್ತಿ ಸಂಸ್ಥೆಗಳು ಗೌರವಿಸಿವೆ.