Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕಾಂಚ್ಯಾಣಿ ಶರಣಪ್ಪ

ನಾಡಿನ ಹೆಸರಾಂತ ಶಿಶು ಸಾಹಿತಿಗಳಲ್ಲಿ ಒಬ್ಬರಾಗಿರುವ ಕಂಚ್ಯಾಣಿ ಶರಣಪ್ಪ ಶಿವಸಂಗಪ್ಪನವರ ಕಾವ್ಯ ಕಾವ್ಯನಾಮ ಕಂಚ್ಯಾಣಿ ಶರಣಪ್ಪ, ಶಿಕ್ಷಕರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಮಾಡಿರುವ ಶರಣಪ್ಪನವರು ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ.

ಮೊದಮೊದಲಿಗೆ ಪ್ರೌಢ ಸಾಹಿತ್ಯವನ್ನು ಕಾವ್ಯವನ್ನು, ರಚಿಸಿದ ಶರಣಪ್ಪನವರು ಮುಂದೆ ಬರೆದಿದ್ದೆಲ್ಲವೂ ಮಕ್ಕಳಿಗಾಗಿಯೇ. ಮಕ್ಕಳ ಗೀತೆಗಳನ್ನು ಪುಟಾಣಿಗಳಿಗೆ ಸರಳವಾಗಿ ಅರ್ಥವಾಗುವಂತೆ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡ ಶರಣಪ್ಪನವರು ಇಪ್ಪತ್ತಕ್ಕೂ ಹೆಚ್ಚು ಶಿಶುಗೀತೆಗಳ ಸಂಕಲನಗಳನ್ನು ಹೊರತಂದಿದ್ದಾರೆ.

ಮಕ್ಕಳಿಗಾಗಿಯೇ ಕಥೆಗಳನ್ನು ಆಧ್ಯಾತ್ಮ ಸಾಧಕರ ಜೀವನಚರಿತ್ರೆಗಳನ್ನು ರಚಿಸಿರುವ ಶರಣಪ್ಪನವರಿಗೆ ರಾಷ್ಟ್ರೀಯ ಬಾಲ ಸಾಹಿತ್ಯ ಪುರಸ್ಕಾರವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವ ಸನ್ಮಾನಗಳು ಸಂದಿವೆ. ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದ ಶರಣಪ್ಪನವರು ಈಗಲೂ ಶಿಶುಸಾಹಿತ್ಯ ರಚನೆಯಲ್ಲಿ ಸಕ್ರಿಯರು.