Categories
ಬಯಲಾಟ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆಂಪವ್ವ ಯಲ್ಲಪ್ಪ ಹರಿಜನ

ಗ್ರಾಮೀಣ ಭಾಗದ ದಿಟ್ಟ ಪ್ರತಿಭೆ ಕೆಂಪವ್ವ ಯಲ್ಲಪ್ಪ ಹರಿಜನ, ನಾಡಿನುದ್ದಕ್ಕೂ ಸಣ್ಣಾಟ ಕಲೆಯ ಕಂಪು ಸೂಸಿ ಕಲಾರಸಿಕರ ಮನಗೆದ್ದ ಅಪೂರ್ವ ಕಲಾವಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಅರಭಾವಿಯ ಕೆಂಪವ್ವ ಹರಿಜನ ಕಲೆಯನ್ನೇ ಅಕ್ಷರವಾಗಿ ಕಲಿತು ಬೆಳಗಿದಾಕೆ. ಸಣ್ಣಾಟ ಕಲೆ ಕರಗತ ಮಾಡಿಕೊಂಡ ಕೆಂಪವ್ವ ‘ಸಂಗ್ಯಾ-ಬಾಳ್ಯಾ’ ಹಾಗೂ ರಾಧಾನಾಟ ಸಣ್ಣಾಟಗಳಲ್ಲಿ ಚಿಮನಾ ಪಾತ್ರಧಾರಿ, ಹಾಡುಗಾರಿಕೆ-ಕುಣಿತದಲ್ಲೂ ಸೈ ಎನಿಸಿಕೊಂಡ ಪ್ರತಿಭೆ. ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿ ಸಣ್ಣಾಟ ಕಲೆಯ ಮೂಲಕ ಭಾಷಾ ಬಾಂಧವ್ಯವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. ಚೆನ್ನೈ, ದೆಹಲಿ, ಮುಂಬಯಿ, ಕಾಸರಗೋಡು, ಸೊಲ್ಲಾಪುರದಲ್ಲೂ ಕಲಾಪ್ರದರ್ಶನ. ನೂರಕ್ಕೂ ಅಧಿಕ ಜನರಿಗೆ ಕಲಾನಿರ್ದೇಶನ ಮಾಡಿದ ಗುರುಮಾತೆ. ನಾಲ್ಕು ದಶಕದಿಂದ ಸಣ್ಣಾಟ ಕಲಾಸೇವಾನಿರತೆ. ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹತ್ತಕ್ಕೂ ಅಧಿಕ ರಾಜ್ಯ ಪ್ರಶಸ್ತಿಗಳು, ೨೩ಕ್ಕೂ ಹೆಚ್ಚು ಜಿಲ್ಲಾ ಪ್ರಶಸ್ತಿ-ನೂರಾರು ಗೌರವ ಸನ್ಮಾನಗಳಿಂದ ಭೂಷಿತ ಕಲಾವಂತೆ.