Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಜೆ.ಆರ್. ಲಕ್ಷ್ಮಣರಾವ್

ಕನ್ನಡ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಹಿರಿಯರಲ್ಲಿ ಒಬ್ಬರಾದ ಜೆ.ಆರ್. ಲಕ್ಷ್ಮಣರಾವ್, ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು.
ಕರ್ನಾಟಕ ವಿಜ್ಞಾನ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಲಕ್ಷ್ಮಣರಾಯರು, ಕನ್ನಡದಲ್ಲಿ ಬರೆದಿರುವ ವಿಜ್ಞಾನ ಕೃತಿಗಳು ಹದಿನೈದಕ್ಕೂ ಹೆಚ್ಚು. ಅವರು ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಮೈಸೂರು ವಿವಿ ಹೊರತಂದ ಕನ್ನಡ ಇಂಗ್ಲಿಷ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದವರು. ಬಾಲ ವಿಜ್ಞಾನವೂ ಸೇರಿ ಅನೇಕ ವಿಜ್ಞಾನ ನಿಯತಕಾಲಿಕೆಗಳನ್ನು ಜೆ.ಆರ್.ಎಲ್. ಮುನ್ನಡೆಸಿದ್ದಾರೆ.