Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ಕೆ. ಮುನಿಯಪ್ಪ

ಜೀವ ವಿಜ್ಞಾನದಲ್ಲಿ ವಿಶಿಷ್ಟ ಸಂಶೋಧನೆಗಳನ್ನು ಮಾಡಿರುವ ಪ್ರೊ| ಕೆ.ಮುನಿಯಪ್ಪ ವಂಶವಾಹಿಗಳ ಮೂಲಕ ಹರಿದು ಬರುವ ಕ್ಯಾನ್ಸರ್ ಮತ್ತು ಟಿ.ಬಿ. ಖಾಯಿಲೆಗಳಿಗೆ ಪರಿಹಾರೋಪಾಯಗಳನ್ನು ಕಂಡು ಹಿಡಿದಿದ್ದಾರೆ. ಯುವ ವಿಜ್ಞಾನಿಗಳಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿರುವ ಪ್ರೊ|| ಕೆ.ಮುನಿಯಪ್ಪ ಅವರ ಸಾಧನೆಯು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ಪಡೆದಿದೆ.
ಕರ್ನಾಟಕ ಸರ್ಕಾರವು ರಚಿಸಿದ್ದ ವಿಷನ್ ಗ್ರೂಪ್ ಸದಸ್ಯರಾಗಿ ಸಹ ಸೇವೆ ಸಲ್ಲಿಸಿರುವ ಪ್ರೊ|| ಮುನಿಯಪ್ಪ ಅವರು ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿ ತಮ್ಮ ನೈಪುಣ್ಯತೆಯನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ.
ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ|| ಕೆ.ಮುನಿಯಪ್ಪರವರು ಹಲವಾರು ಸಂಶೋಧನಾ ಸಂಸ್ಥೆಗಳ ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಎಸ್.ಎಸ್.ಭಟ್ನಾಗರ್ ಪ್ರಶಸ್ತಿ ಪ್ರೊ|| ಮುನಿಯಪ್ಪ ಅವರಿಗೆ ಸಂದಿದೆ.