Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಜೈಜಗದೀಶ್

ಕೊಡಗಿನಿಂದ ಕನ್ನಡ ಚಿತ್ರವಲಯಕ್ಕೆ ಬಂದ ಪ್ರಪ್ರಥಮ ನಟ ಜೈಜಗದೀಶ್, ನಟ, ನಿರ್ಮಾಪಕ, ನಿರ್ದೇಶಕ ಮತ್ತು ಕಿರುತೆರೆ ಕಲಾವಿದರಾಗಿ ಚಿರಪರಿಚಿತ. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ರ ಸಿನಿಶೋಧ.
ಮೈಸೂರಿನ ರಾಮಕೃಷ್ಣ ಶಾಲೆ, ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಜೈಜಗದೀಶ್ ಪುಟ್ಟಣ್ಣ ಕಣಗಾಲ್ ಕಣ್ಣಿಗೆ ಬಿದ್ದವರೇ ೧೯೭೬ರಲ್ಲಿ ‘ಫಲಿತಾಂಶ’ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಹಲಬಗೆಯ ಪಾತ್ರಗಳಲ್ಲಿ ಮಿಂಚಿದ ಪ್ರತಿಭಾವಂತ, ಬಂಧನ, ಗಾಳಿಮಾತು, ಪಡುವಾರಹಳ್ಳಿ ಪಾಂಡವರು, ಮುಂಗಾರುಮಳೆ ಹೆಸರು ತಂದುಕೊಟ್ಟ ಚಿತ್ರಗಳು. ೪೨ ವರ್ಷಗಳ ಸುದೀರ್ಘ ಚಿತ್ರಪಯಣದಲ್ಲಿ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ ಹಿರಿಮೆ, ಪತ್ನಿ ವಿಜಯಲಕ್ಷ್ಮಿಸಿಂಗ್ ಜೊತೆಗೊಡಿ ೨೫ಕ್ಕೂ ಅಧಿಕ ಚಿತ್ರಗಳನ್ನು ತೆರೆಗಿತ್ತ ನಿರ್ಮಾಪಕ, ನಿರ್ದೇಶಕ ಕೂಡ. ಚಲನಚಿತ್ರ ಅಕಾಡೆಮಿ, ಕಲಾವಿದರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ ಜೈಜಗದೀಶ್ ಚಿತ್ರನಿರ್ಮಾಣದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಫಿಲಂಫೇರ್ ಪ್ರಶಸ್ತಿಗಳಿಗೂ ಭಾಜನರು.