Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಜನ್

ಕನ್ನಡ ಚಿತ್ರಸಂಗೀತದ ಮಾಧುರ್ಯತೆಯನ್ನು ಸವಿಜೇನಾಗಿಸಿದ ಅಪೂರ್ವ ಜೋಡಿ ರಾಜನ್ ನಾಗೇಂದ್ರ ಏಳು ಭಾಷೆಯ ಚಿತ್ರಗಳಿಗೆ ಸ್ವರಸಂಯೋಜಿಸಿದ ಅನನ್ಯ ಸಾಧಕ ಸಹೋದರರು.
ಮೈಸೂರಿನ ಜಯಮಾರುತಿ ಆರ್ಕೆಸ್ಟ್ರಾದಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಪಿ.ಕಾಳಿಂಗರಾವ್ರ ತಂಡದ ಮುಖೇನ ಮುಂಚೂಣಿಗೆ ಬಂದು ೧೯೫೨ರಲ್ಲಿ ‘ಸೌಭಾಗ್ಯಲಕ್ಷ್ಮಿ’ ಚಿತ್ರದ ಮುಖೇನ ಸಂಗೀತ ನಿರ್ದೇಶಕರಾದವರು. ನವನವೀನ ವಿಧಾನಗಳ ಅನ್ವೇಷಣೆ, ಪ್ರಯೋಗಶೀಲತೆ, ಶಾಸ್ತ್ರೀಯ ವಿಧಾನಗಳನ್ನು ಎಳ್ಳಷ್ಟು ಬಿಡದ ಸೋಪಜ್ಞ ಶೈಲಿ, ಮಾಧುರ್ಯದ ಮಂಗಳ ಸ್ವರ ರಾಜನ್-ನಾಗೇಂದ್ರರ ವಿಶೇಷತೆ. ನ್ಯಾಯವೇ ದೇವರು, ಬಯಲುದಾರಿ, ಭಾಗ್ಯವಂತರು, ನಾ ನಿನ್ನ ಮರೆಯಲಾರೆ, ಎರಡು ಕನಸು, ಗಂಧದಗುಡಿ, ಪಾವನಗಂಗಾ ಮುಂತಾದ ಚಿತ್ರಗಳ ಯಶಸ್ಸಿನ ಹಿಂದೆ ಈ ಜೋಡಿಯ ಸಂಗೀತದ್ದು ಬಹುಪಾಲು. ಕನ್ನಡ, ತಮಿಳು, ತೆಲುಗು, ತುಳು, ಹಿಂದಿ, ಮಲೆಯಾಳಂ ಸೇರಿದಂತೆ ೩೭೫ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ ಇವರು ಮೂರು ಚಿತ್ರಗಳ ನಿರ್ಮಾಪಕರೂ ಸಹ, ಕರ್ನಾಟಕ-ಆಂಧ್ರಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಈ ಜೋಡಿ ಸಂಗೀತಪ್ರೇಮಿಗಳಿಗೆ ಸದಾ ಅಚ್ಚುಮೆಚ್ಚು.