Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದತ್ತುರಾಜ್

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ವಿಶಿಷ್ಟ ಛಾಪು ಮೂಡಿಸಿದವರಲ್ಲಿ ಚಿ.ದತ್ತುರಾಜ್ ಸಹ ಒಬ್ಬರು. ನಿರ್ದೇಶಕ, ಬರಹಗಾರ, ಪತ್ರಕರ್ತರಾಗಿದ್ದ ಅವರು ಬಹುಮುಖಿ ಪ್ರತಿಭೆ.
ಹೆಸರಾಂತ ಚಿತ್ರಸಾಹಿತಿ ಚಿ. ಉದಯಶಂಕರ್ ಅವರ ಸಹೋದರರಾದ ಚಿ. ದತ್ತುರಾಜ್ ಅವರಿಗೆ ಬಾಲ್ಯದಿಂದಲೂ ಸಹಜವಾಗಿಯೇ ಸಿನಿಮಾದತ್ತ ಒಲವು. ೧೯೭೦ರಲ್ಲಿ ನಿರ್ದೇಶಕ ರವಿ ಅವರ ‘ಅರಶಿನ ಕುಂಕುಮ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗುವ ಮೂಲಕ ಚಿತ್ರರಂಗಕ್ಕೆ ಪ್ರವೇಶ. ಆನಂತರ ೧೯೮೧ರಲ್ಲಿ ರಾಜ್ ಕುಮಾರ್ ಅಭಿನಯದ ‘ಕೆರಳಿದ ಸಿಂಹ’ ಚಿತ್ರದಿಂದ ಸ್ವತಂತ್ರ ನಿರ್ದೇಶಕನಾಗಿ ಹೆಜ್ಜೆ ಬಳಿಕ ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಮೃತ್ಯುಂಜಯ, ಅರಳಿದ ಹೂವುಗಳು, ಆನಂದಜ್ಯೋತಿ ಚಿತ್ರಗಳ ನಿರ್ದೇಶನ, ನಿರ್ದೇಶನದ ಜೊತೆಗೆ ಸಂಭಾಷಣೆಕಾರರಾಗಿಯೂ ಸಮರ ಮತ್ತು ಹೃದಯಕಳ್ಳರು ಚಿತ್ರಕ್ಕೆ ಸಾಹಿತ್ಯಸೇವೆ. ಕೆಲಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿದ ಅವರು ‘ವಿಜಯಚಿತ್ರ’ ಪತ್ರಿಕೆಯಲ್ಲಿ ರಾಜ್ ಬದುಕಿನ ಕುರಿತು ೯೩ ಸಂಚಿಕೆಗಳಲ್ಲಿ ಬರೆದ ‘ಕಥಾನಾಯಕನಕಥೆ’ ಅಂಕಣ ಬಲು ಜನಪ್ರಿಯ. ಸದಭಿರುಚಿಯ ಚಿತ್ರಗಳನ್ನು ತೆರೆಗಿತ್ತದತ್ತುರಾಜ್ ಅವರು ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೂ ಭಾಜನರು.