Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಂ. ಬಸವಂತಪ್ಪ

ವೈದ್ಯೋನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥವಾಗಿ ಬಾಳಿದ ವೈದ್ಯರು ಡಾ. ಎಂ.ಬಸವಂತಪ್ಪ, ಉಚಿತ-ಮಾನವೀಯ ಸೇವೆಗೆ ಹೆಸರಾದ ವೈದ್ಯರು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ೧೯೫೧ರಲ್ಲಿ ಜನಿಸಿದ ಬಸವಂತಪ್ಪ ಬಡತನದ ಬೇಗೆಯಲ್ಲಿ ಅರಳಿದ ಸಾಧಕರು. ಸಿರಿಗೆರೆ ಮತ್ತು ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ, ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗುವ ಕನಸು ನನಸಾಗಿಸಿಕೊಂಡ ಛಲಗಾರ, ಹುಟ್ಟೂರಿನಲ್ಲಿ ವೈದ್ಯವೃತ್ತಿ ಆರಂಭಿಸಿದ ಬಸವಂತಪ್ಪ ಮೂರೂವರೆ ದಶಕಗಳಿಗೂ ಅಧಿಕ ಕಾಲ ಹಗಲಿರುಳೆನ್ನದೇ ರೋಗಿಗಳಿಗೆ ಚಿಕಿತ್ಸಾ ಸೇವೆ ಒದಗಿಸಿದವರು. ೨ ರೂ. ವೈದ್ಯರೆಂದೇ ಹೆಸರಾದ ಅವರು ೨೦ ವರ್ಷಗಳ ಬಳಿಕ ೫ ರೂಪಾಯಿ ಪಡೆಯಲಾರಂಭಿಸಿದ್ದು ವಿಶೇಷ, ಬಡರೋಗಿಗಳಿಗೆ ಹಣಪಡೆಯದೇ ಉಚಿತ ಸೇವೆ ಒದಗಿಸುವ ಮಾನವೀಯ ವ್ಯಕ್ತಿ, ಕೊರೊನಾ ಸಂದರ್ಭದಲ್ಲಿ ಅರೆದಿನವೂ ಕ್ಲಿನಿಕ್ ಮುಚ್ಚದೇ ಜನಸಾಮಾನ್ಯರ ಅನಾರೋಗ್ಯದ ಸಂಕಟಗಳನ್ನು ನಿವಾರಿಸಿದ ಪುಣ್ಯಾತ್ಮರು. ಹಳ್ಳಿಗಾಡಿನಲ್ಲಿ ಹೆಸರುವಾಸಿಯಾಗಿರುವ ಡಾ. ಬಸವಂತಪ್ಪ ಅವರ ಕೈಗುಣಕ್ಕೆ ವಾಸಿಯಾಗದ ರೋಗಿ ಬಲು ವಿರಳ, ಅಂತಃಕರಣ, ಮಾನವೀಯತೆ ಮತ್ತು ವೃತ್ತಿ ಬದ್ಧತೆಯಿಂದ ರೋಗಿಗಳ ಮೊಗದಲ್ಲಿ ನಗುಚಿಮ್ಮಿಸಿದ ಆದರ್ಶ ಧನ್ವಂತರಿ.