Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಗುರುರಾಜ ಹೆಬ್ಬಾರ್

ಮೈಸೂರಿನಲ್ಲಿ ವೈದ್ಯಕೀಯ ಪದವಿ ಪಡೆದ ಡಾ. ಗುರುರಾಜ ಹೆಬ್ಬಾರ್ ಅವರು ಮೊದಲಿಗೆ ಗ್ರಾಮೀಣ ಭಾಗದಲ್ಲಿಯೇ ತಮ್ಮ ವೃತ್ತಿಯನ್ನು ಆರಂಭಿಸಿ ಬಹುಬೇಗ ಗ್ರಾಮೀಣ ಜನರ ನೆಚ್ಚಿನ ವೈದ್ಯರೆನಿಸಿಕೊಂಡರು. ವಿಶೇಷವಾಗಿ ಬಡವರ ಡಾಕ್ಟರ್ ಎಂದು ಕರೆಸಿಕೊಂಡ ಗುರುರಾಜ ಹೆಬ್ಬಾರ್ ಸರ್ಕಾರ ಸೇವೆಯಲ್ಲಿದ್ದರೂ ಬಲು ಬೇಗ ಸ್ವತಂತ್ರವಾಗಿ ಹಾಸನದಲ್ಲಿ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದರು.

ಜನಸಾಮಾನ್ಯರಿಗೆ ಸುಲಭವಾಗಿ ಆರೋಗ್ಯ ಸೌಲಭ್ಯಗಳು ದೊರೆಯಬೇಕೆಂಬ ಸದುದ್ದೇಶದಿಂದ ಸಹಕಾರಿ ತತ್ವದಲ್ಲಿ ಆಸ್ಪತ್ರೆಯನ್ನು ಆರಂಭಿಸಿದ ಅವರು ಹಾಸನ ಜಿಲ್ಲೆಯಲ್ಲಿ ಸಹಕಾರಿ ತತ್ವವನ್ನು ಅತ್ಯಂತ ವ್ಯಾಪಕ ಚಳುವಳಿಯನ್ನಾಗಿ ರೂಪಿಸಿದರು. ಹಾಸನದಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಆಸ್ಪತ್ರೆ, ವೃದ್ಧಾಶ್ರಮ, ಸಿ.ಟಿ. ಸ್ಕ್ಯಾನ್ ಕೇಂದ್ರಗಳನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಗೌರವ ಸನ್ಮಾನಗಳು ಇವರನ್ನರಸಿ ಬಂದಿವೆ.