Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಚಿಂದಿ ವಾಸುದೇವಪ್ಪ

ಮೀನು ಕೃಷಿ ವಿಜ್ಞಾನದಲ್ಲಿ ರಾಷ್ಟ್ರದಲ್ಲೇ ಅಚ್ಚಳಿಯದ ಹೆಸರು ಡಾ. ಚಿಂದಿ ವಾಸುದೇವಪ್ಪ, ಪ್ರಖರ ಪಾಂಡಿತ್ಯ, ದಕ್ಷ ಆಡಳಿತ, ಜ್ಞಾನದ ಶಿಖರವೆನಿಸಿದ ಕೃಷಿ ತಜ್ಞರು.
ಕೃಷಿ ವಿಜ್ಞಾನ ಕ್ಷೇತ್ರಕ್ಕೆ ಮಲೆನಾಡಿನ ಕೊಡುಗೆ ಡಾ. ಚಿಂದಿ ವಾಸುದೇವಪ್ಪ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಹುಟ್ಟೂರು. ತವರೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮಂಗಳೂರು ವಿವಿಯಲ್ಲಿ ಮೀನುಗಾರಿಕೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ. ಕೇರಳದ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಎಚ್ಡಿ ಪಡೆದ ಬಳಿಕ ಅನೇಕ ಕೃಷಿ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ನಿರಂತರ ಸೇವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳ ನಿರ್ದೇಶಕ- ಸಲಹೆಗಾರರಾಗಿಯೂ ದುಡಿದ ಕೀರ್ತಿ, ಬೆಂಗಳೂರು ಕೃಷಿ ವಿವಿಯ ಡೀನ್ ಆಗಿದ್ದ ಡಾ. ಚಿಂದಿ ವಾಸುದೇವಪ್ಪ ಹರಿಯಾಣದ ರಾಷ್ಟ್ರೀಯ ಆಹಾರ ಸಂಸ್ಕರಣಾ ಸಂಸ್ಥೆ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯ ಅಭಿವೃದ್ಧಿಗೆ ಜ್ಞಾನಧಾರೆಯೆರೆದ ವಿಶ್ರಾಂತ ಕುಲಪತಿಗಳು,