Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ಉಡುಪಿ ಶ್ರೀನಿವಾಸ

ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಕೀರ್ತಿ ಬೆಳಗಿದ ಸಾಧಕಚೇತನ ಪ್ರೊ. ಉಡುಪಿ ಶ್ರೀನಿವಾಸ, ನಾಡಿನ ಅತ್ಯುತ್ತಮ ಅಭಿಯಂತರರು, ವೈಜ್ಞಾನಿಕ ಸಂಶೋಧಕರು ಮತ್ತು ದಕ್ಷ ಉದ್ಯಮಿ.
ಉಡುಪಿಯಲ್ಲಿ ೧೯೪೭ರ ಫೆಬ್ರವರಿ ೧೪ರಂದು ಜನಿಸಿದ ಶ್ರೀನಿವಾಸ ಬಡಕುಟುಂಬದ ಕೂಸು. ಅಕ್ಷರದಿಂದಲೇ ಅರಳಿದ ಮೇರು ಪ್ರತಿಭೆ, ಶಾಲಾ ದಿನಗಳಿಂದಲೂ ಅತ್ಯುತ್ತಮ ವಿದ್ಯಾರ್ಥಿಯಾದ ಉಡುಪಿ ಶ್ರೀನಿವಾಸ ಮದ್ರಾಸ್ನ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್., ಎಂ.ಟೆಕ್. ಮಾಡಿದರು. ಬೆಂಗಳೂರು ಐಐಎಸ್ಸಿಯಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದ ಪ್ರತಿಭಾಶಾಲಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಯೋಜನಾ ಸಿಬ್ಬಂದಿಯಾಗಿ ವೃತ್ತಿ ಬದುಕು ಆರಂಭಿಸಿ ಸಹಾಯಕ ಪ್ರಾಧ್ಯಾಪಕ, ಸಹಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಅನನ್ಯ ಸೇವೆ. ಭಾರತಕ್ಕೆ ಕ್ಯಾಪಿಡ್ ಪ್ರೋಟೋಟೈಪಿಂಗ್ ಪರಿಚಯಿಸಿದ ಮಹನೀಯರು, ತಂತ್ರಜ್ಞಾನದ ಹಲವು ಉಪಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು.