Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಡಿ. ನಾಗರಾಜ್

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್)ಯನ್ನು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸ್ಥೆಯಾಗಿ
ರೂಪಿಸಿರುವ ಕೀರ್ತಿ ಡಾ.ಡಿ. ನಾಗರಾಜ ಅವರದು.
ನಿಮ್ಹಾನ್ಸ್‌ನ ನರವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ೧೯೭೯-೮೦ರಲ್ಲಿ ಸೇರಿದ ಅವರು, ೨೦೦೨ರಿಂದ ಸಂಸ್ಥೆಯ ನಿರ್ದೇಶಕ-ಉಪಕುಲಪತಿ ಜವಾಬ್ದಾರಿ ಹೊತ್ತಿರುವರು.
ಹೋರಾಡಿ
ಸಂಸ್ಥೆಗೆ ಸೇರಿದ ಹತ್ತು ಎಕರೆ ಜಾಗ ಒತ್ತುವರಿಯಿಂದಾಗಿ ಕೈತಪ್ಪುವುದರಲ್ಲಿದ್ದಾಗ ಒತ್ತುವರಿದಾರರ ವಿರುದ್ಧ ಆ ಜಾಗವನ್ನು ಮರಳಿ ಪಡೆಯುವ ಮೂಲಕ ವೃತ್ತಿಧರ್ಮ ಎತ್ತಿಹಿಡಿದವರು ಶ್ರೀಯುತರು. ಮಾನಸಿಕ ಆರೋಗ್ಯದಿಂದ ಬಳಲುತ್ತಿರುವ ದೇಶದ ಎರಡು ಕೋಟಿಗೂ ಹೆಚ್ಚಿನ ಜನರ ಆರೋಗ್ಯ ಸುಧಾರಿಸಲು ಅಲ್ಪಾವಧಿಯ ಕೋರ್ಸ್‌ಗಳನ್ನು ಆರಂಭಿಸಿ ಸಿಬ್ಬಂದಿ ರೂಪಿಸುವ ಯೋಜನೆಯ ಹಿಂದೆ ಡಾ. ನಾಗರಾಜ ಅವರ ಪರಿಶ್ರಮ ಅಪಾರ.
ಶ್ರೀಯುತರ ೨೧೦ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಲೇಖನಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟ. ನರವಿಜ್ಞಾನ ಕ್ಷೇತ್ರದ ಆವಿಷ್ಕಾರಗಳ ಕುರಿತು ಅಪಾರ ಜ್ಞಾನ ಹೊಂದಿರುವ ಅವರು ಆ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲರು.
ಡಾ. ನಾಗರಾಜ ಅವರು ನ್ಯೂರಾಲಜಿಕಲ್ ಸೊಸೈಟಿ ಆಫ್ ಇಂಡಿಯಾ, ಇಂಡಿಯನ್ ಅಕಾಡೆಮಿ ಆಫ್ ನ್ಯೂರಾಲಜಿ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್‌ನ ಆಜೀವ ಸದಸ್ಯರು.
ವೃತ್ತಿ ಗೌರವ ಮತ್ತು ಕಳಕಳಿಯ ಮೂಲಕ ಸಮಾಜ ಸೇವೆಗೆ ಕಟಿಬದ್ಧರಾದವರು ಡಾ. ನಾಗರಾಜ.