Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್.ವಿ. ಕೊಟ್ಟೂರೇಶ್

ಶಿವಮೊಗ್ಗದಲ್ಲಿ ನವಜಾತ ಶಿಶು ಚಿಕಿತ್ಸೆಗೆ ಸಂಬಂಧಿಸಿದಂತೆ ಹೆಸರು ಮಾಡಿದ ಪ್ರಸಿದ್ಧ ಮಕ್ಕಳ ತಜ್ಞ ಡಾ. ಕೊಟ್ಟೂರೇಶ್
ಅವರು.
ಅಲ್ಲಿನ ಕೊಟ್ಟೂರೇಶ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಾಪಕರು. ಬೆಳಗಾವಿಯಲ್ಲಿ ಜವಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪಡೆದವರು.
ನವಜಾತ ಶಿಶುವಿನ ಆರೈಕೆ, ಚಿಕಿತ್ಸೆ ಕುರಿತಂತೆ ಮಣಿಪಾಲದ ಕೆ.ಎಂ.ಸಿ. ಅಲ್ಲದೆ ಮಹಾರಾಷ್ಟ್ರ, ಕೇರಳ ಮತ್ತಿತರ ಕಡೆ ವಿಷಯ ಮಂಡಿಸಿ ಜಾಗೃತಿ ಮೂಡಿಸಿದ್ದಾರೆ.
ಅವಧಿ ಪೂರ್ವ ಜನಿಸುವ ಕಡಿಮೆ ತೂಕವುಳ್ಳ ಮಗು, ಆರೈಕೆಗೆ ಹೆಚ್ಚಿನ ಕಾಳಜಿ ನೀಡಬೇಕಾದ ಶಿಶುಗಳ ಬಗೆಗೆ ಹೆಚ್ಚಿನ ಕಾಳಜಿ ವಹಿಸುವ ವೈದ್ಯರು. ೭೫೦, ೯೦೦ ಗ್ರಾಂ ತೂಕ ಹೊಂದಿ ಜನಿಸಿದ ಶಿಶು ಕೂಡಾ ಉತ್ತಮವಾಗಿ ಚೇತರಿಸಿಕೊಂಡಿವೆ ಎಂಬುದು ಆಸ್ಪತ್ರೆಯಲ್ಲಿ ಸಿಗುವ ಗುಣಮಟ್ಟದ ಚಿಕಿತ್ಸೆ ಮತ್ತು ನವಜಾತ ಶಿಶುಗಳ ಆರೈಕೆ ಕುರಿತು ಇವರಿಗಿರುವ ಕಾಳಜಿಯ ದ್ಯೋತಕ.
ವೈದ್ಯಕೀಯ ರಂಗದಲ್ಲಿ ಶ್ರೀಯುತರ ಸೇವೆಯನ್ನು ಪರಿಗಣಿಸಿ ಶಿವಮೊಗ್ಗ ಮತ್ತು ಆಸುಪಾಸಿನ ಜಿಲ್ಲೆಗಳ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಮಕ್ಕಳ ಆರೋಗ್ಯ ಮತ್ತು ಪಾಲನೆಯ ಬಗೆಗೆ ವಿಶೇಷ ಗಮನ ನೀಡುವ ಕರ್ನಾಟಕದ ಖ್ಯಾತ ವೈದ್ಯರು ಡಾ. ಎಚ್.ವಿ. ಕೊಟ್ಟೂರೇಶ್.