Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ|| ಬಸವರಾಜ ಸಬರದ

ಕಾವ್ಯ, ಸಂಶೋಧನೆ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಹಲವು ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಬಸವರಾಜ ಸಬರದ ಅವರು ನಾಡಿನ ಪ್ರಮುಖ ಸಾಹಿತಿಗಳು, ಹೋರಾಟ, ಬೆಳದಿಂಗಲು ಬಿಸಿಲಾಯಿತು, ಕೆಂಡ ಸಂಪಿಗೆ ಇವರ ಮುಖ್ಯ ಕಾವ್ಯ ಸಂಕಲನಗಳು.

ಗುಲಬರ್ಗಾ, ರಾಯಚೂರು ಹಾಗು ಬೀದರ್ ಜಿಲ್ಲೆಯ ಅನುಭಾವಿ ಕವಿಗಳ ಬಗ್ಗೆ ಸಂಶೋಧನೆ ನಡೆಸಿರುವ ಸಬರದ ಅವರು ಬಸವೇಶ್ವರ ಹಾಗೂ ಪುರಂದರ ದಾಸರ ಬಗ್ಗೆ ಸಹ ಆಳವಾದ ಅಧ್ಯಯನ ಮಾಡಿದ್ದಾರೆ.

‘ಪ್ರತಿರೂಪ’, ‘ರೆಕ್ಕೆ ಮೂಡಿದಾಗ’, ‘ನಾಕುಬೀದಿ’ ನಾಟಕಗಳು ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ. ವಿಮರ್ಶಾ ಕ್ಷೇತ್ರದಲ್ಲಿಯೂ ಇವರ ಸೇವೆ ಗಣನೀಯ. ಕುವೆಂಪು ಸಾಹಿತ್ಯ ಪುರಸ್ಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹಾದ್ದೂರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.