Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವೆಂಕಟರಮಣ ನೀಲಂ

ನರವಿಜ್ಞಾನ ಕ್ಷೇತ್ರದ ಬಹುದೊಡ್ಡ ಹೆಸರು ಡಾ. ವೆಂಕಟರಮಣ ಕೆ. ನೀಲಂ,
ತಿರುಪತಿ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ. ಬಳಿಕ ನ್ಯೂರೋ ಸರ್ಜ ೯ರಿಯಲ್ಲಿ ಮಾಸ್ಟರ್ ಆಫ್ ಸರ್ಜರಿ ಮಾಡಿರುವ ಶ್ರೀಯುತರು ೧೯೮೬ರಲ್ಲಿ ನಿಮ್ಹಾನ್ಸ್‌ನ ಉತ್ತಮ ವೈದ್ಯ ವಿದ್ಯಾರ್ಥಿ ಎಂಬ ಹಿರಿಮೆಗೆ ಪಾತ್ರರು. ಜರ್ಮನಿಯಲ್ಲಿ ಮೈಕ್ರೋ ನ್ಯೂರೋ ಸರ್ಜರಿ ತರಬೇತಿ ಪಡೆದು ಕಳೆದ ೨೦ ವರ್ಷಗಳಿಂದ ನರವೈದ್ಯ ವಿಜ್ಞಾನ ರಂಗದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವ ನುರಿತ ವೈದ್ಯರಾಗಿ ಜನಪ್ರಿಯರು.
ಈವರೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ನರರೋಗ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿರುವರು. ನಿಮ್ಹಾನ್ಸ್ ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಕರಾಗಿ ಹಾಗೂ ನಿರ್ದೇಶಕರಾಗಿ, ಈಗ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಉಪಾಧ್ಯಕ್ಷರು ಮತ್ತು ನಿರ್ದೇಶಕರಾಗಿ ಶ್ರೀ ವೆಂಕಟರಮಣ ಕೆ.ನೀಲಂ ಅವರಿಂದ ಸೇವೆ ಸಲ್ಲಿಕೆ.
ನರವಿಜ್ಞಾನ ಕ್ಷೇತ್ರದಲ್ಲಿ ಅವರು ಪಡೆದಿರುವ ಅಪಾರ ಜ್ಞಾನ ಮತ್ತು ಅನುಭವ ರಾಷ್ಟ್ರ, ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್‌ಗಳಲ್ಲಿ ಲೇಖನಗಳಾಗಿ ಪ್ರಕಟ. ನ್ಯೂರೋ ಸರ್ಜರಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ, ಸಂಶೋಧನೆ ಕೈಗೊಂಡು ಹಲವು ಕೃತಿಗಳನ್ನೂ ಶ್ರೀಯುತರು ಬರೆದಿರುವರು.
ಭಾರತೀಯ ನ್ಯೂರೋಸರ್ಜಿಕಲ್ ಸೊಸೈಟಿಯ ಸದಸ್ಯತ್ವ ಸೇರಿದಂತೆ ಅನೇಕ ವೈದ್ಯಕೀಯ ಸಂಸ್ಥೆಗಳ ಸದಸ್ಯತ್ವಕ್ಕೆ ಶ್ರೀಯುತರು ಭಾಜನರು.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನ್ಯೂರೋ-ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಕೀರ್ತಿಗೆ ಭಾಜನರಾದವರು ಶ್ರೀ ಡಾ. ವೆಂಕಟರಮಣ ಕೆ.ನೀಲಂ.