Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಶಕುಂತಲಾ ನರಸಿಂಹನ್

ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಗಳೆರಡರಲ್ಲೂ ಸಾಧನೆ ಮಾಡಿ ಎರಡು ಗಾಯನ ಪದ್ಧತಿಗಳಲ್ಲಿಯೂ ಆಕಾಶವಾಣಿ ‘ಎ’ ಶ್ರೇಣಿಯ ಕಲಾವಿದರೆಂದು ಗುರುತಿಸಲ್ಪಟ್ಟ ಮೊದಲ ಹಾಗೂ ಏಕೈಕ ಸಂಗೀತಜ್ಞೆ ಡಾ|| ಶಕುಂತಲಾ ನರಸಿಂಹನ್.
ಸಂಗೀತ ವಿದ್ವಾಂಸರಾಗಿ, ಕಲಾವಿದರಾಗಿ ಪ್ರಸಿದ್ಧರಾದ ಶಕುಂತಲಾ ನರಸಿಂಹನ್ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಎರಡೂ ಶೈಲಿಗಳ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಪ್ರಖ್ಯಾತರಾದವರು. ಸಂಗೀತದಲ್ಲಿ ಹಲವಾರು ಚಿನ್ನದ ಪದಕಗಳನ್ನು ಪಡೆದು ಸಂಗೀತ ಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಸಂಪಾದಿಸಿರುವ ಹೆಗ್ಗಳಿಕೆ ಇವರದು.