Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ದೇವರಾಜ ರೆಡ್ಡಿ

ಕೃಷಿ ತಂತ್ರಜ್ಞಾನದಲ್ಲಿ ನಿಪುಣರಾದ ಭೂ-ವಿಜ್ಞಾನಿ ದೇವರಾಜ ರೆಡ್ಡಿ ಕೊಳವೆ ಬಾವಿ ಮರುಪೂರಣ ಪ್ರಯೋಗದಲ್ಲಿ ಯಶಸ್ವಿಯಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳಿಗೆ ಮರುಜೀವ ಕೊಟ್ಟವರು.
ರಾಜ್ಯದಾದ್ಯಂತ ಸಾವಿರಾರು ಕೊಳವೆ ಬಾವಿಗಳು ವಿಫಲವಾಗುವ ಸಂದರ್ಭದಲ್ಲಿ ಅವುಗಳಿಗೆ ಲಭ್ಯವಿರುವ ಅಂತರ್ಜಲ ತುಂಬುವಂತೆ ಮಾಡಿ ಕೊಳವೆ ಬಾವಿಗಳ ಮೂಲಕ ನೀರು ಉಪಯೋಗಿಸಿಕೊಳ್ಳಲು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದರು. ದೇವರಾಜ ರೆಡ್ಡಿ ಅವರ ಪ್ರಯೋಗಗಳನ್ನು ಹಲವರಿಗೆ ತರಬೇತು ನೀಡಿ ಅವರು ಕೂಡ ರಾಜ್ಯದುದ್ದಕ್ಕೂ ಜಲಮರುಪೂರಣ ಯೋಜನೆಯಲ್ಲಿ ಪಾಲುಗೊಳ್ಳುವಂತೆ ಮಾಡಿದ್ದಾರೆ. ಇವರು ಕೊಳವೆ ಬಾವಿ ಜಲಮರುಪೂರಣ ಕುರಿತ ಅನೇಕ ಪರಿಚಯಾತ್ಮಕ ಹೊತ್ತಗೆಗಳನ್ನು ರೈತಾಪಿ ಜನರಿಗೆ ಸಿಗುವಂತೆ ಮಾಡಿದ್ದಾರೆ.