Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಸಣ್ಣರಾಮನಾಯ್ಕ

ಜಾನಪದ ಮತ್ತು ಬುಡಕಟ್ಟು ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿ ಜಾನಪದ ಸಾಹಿತ್ಯಕ್ಕೆ ಮೌಲ್ಯಯುತ ಕಾಣಿಕೆ ನೀಡಿದವರು ಡಾ. ಸಣ್ಣರಾಮ ನಾಯ್ಕ ಅವರು.
೧೯೫೪ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕೋಟಿಪುರ ತಾಂಡದಲ್ಲಿ ಜನನ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು, ಹೊಸನಗರದ ಕೊಡಚಾದ್ರಿ ಕಾಲೇಜುಗಳಲ್ಲಿ ಅಧ್ಯಾಪನ ವೃತ್ತಿ. ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ.
ಶ್ರೀಯುತರ ಆಸಕ್ತಿಯ ಕ್ಷೇತ್ರಗಳು ಜಾನಪದ ಮತ್ತು ಬುಡಕಟ್ಟು ಅಧ್ಯಯನ. ‘ಲಂಬಾಣಿ-ಸಂಸ್ಕೃತಿ’ ಮತ್ತು ‘ಬುಡಕಟ್ಟು- ಸಂಸ್ಕೃತಿ’ ಸಂಶೋಧನಾ ಕೃತಿಗಳು. ‘ಜಡತೆ ಮತ್ತು ಚಲನೆ’ ಹಾಗೂ ‘ಅಂಬೇಡ್ಕರ್ ಮತ್ತು ಮೀಸಲಾತಿ ಕುರಿತು ವಿಚಾರ ಸಾಹಿತ್ಯ, ಬಂಕಿಮ ಚಂದ್ರರ ವಿಷವೃಕ್ಷ ಮತ್ತು ಆನಂದ ಮಠ ವಿಮರ್ಶಾ ಕೃತಿಗಳ ರಚನೆ. ‘ಕಾಮದಹನ ಮತ್ತು ‘ಕೆಮ್ಮಾವು’ ಕಥಾ ಸಂಕಲನಗಳ ಪ್ರಕಟ.
ಲಂಬಾಣಿ ಗಾದೆಗಳು, ಲಂಬಾಣಿ ಒಗಟುಲೋಕ, ಲಂಬಾಣಿ ಸಾಂಸ್ಕೃತಿಕ ಒಗಟುಗಳಂತಹ ವಿಶಿಷ್ಟ ಕೃತಿಗಳನ್ನು ನೀಡುವ ಮೂಲಕ ಜಾನಪದ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದವರು ಡಾ. ಸಣ್ಣರಾಮ ನಾಯ್ಕ.