Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಫರಿದಾ ರಹಮತುಲ್ಲಾ ಖಾನ್

ಉರ್ದು ಕವಿ, ಸಾಹಿತಿ, ಪತ್ರಿಕೋದ್ಯಮಿ, ಶಿಕ್ಷಣ ತಜ್ಞೆ ಸಮಾಜ ಸೇವಕಿ ಅಲ್ಲದೇ ಶೋಷಿತ ಮಹಿಳೆ ಹಾಗೂ ಮಕ್ಕಳ ಸಾಮಾಜಿಕ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಪ್ರಜ್ಞಾವಂತ ಮಹಿಳೆ ಶ್ರೀಮತಿ ಫರೀದಾ ರಹಮತುಲ್ಲಾ ಖಾನ್.
ಬೆಂಗಳೂರು, ಧಾರವಾಡ, ಅಲೀಘಡ್, ವಿಶ್ವವಿದ್ಯಾನಿಲಯಗಳಿಂದ ಸ್ನಾತಕ ಪದವಿ ಪಡೆದಿರುವ ಶ್ರೀಮತಿ ಫರೀದಾ ಅವರು ಕಳೆದ ೨೦ ವರ್ಷಗಳಿಂದ ಝರಿನ್ ಶುವಾಯೇಂ” ಉರ್ದು ಮಾಸಿಕ ಪತ್ರಿಕೆಯ ಸಂಪಾದಕಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
“ಟೂಟೆಮಾಲಾ ಭಿಕ್ಷೆ ಮೋತಿ’, ‘ದರ್ದ್ ಕಿ ಗೂಂಜ್’, ‘ಖಾತಿಲ್ ಮಸಿಹ’ ಎಂಬ ಸಣ್ಣ ಕಥೆ ಸಂಕಲಗಳನ್ನು ‘ಅನಮೋಲ್ ಯಾದೇಂ’, ‘ಕಿಸಮತ್ ಕಾಯ್’ ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ.
ಮೌಂಟ್ ಅರಾಫತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳಿಗೆ ನರ್ಸರಿಯಿಂದ ಹೈಸ್ಕೂಲು ವರೆಗೆ ಶಿಕ್ಷಣ ನೀಡುತ್ತಿದ್ದಾರೆ. ಕನ್ನಡ ಪ್ರಥಮ ಭಾಷೆಯೊಡನೆ ಹೋಲೀ ಮದರ್ಸ್ ಇಂಗ್ಲಿಷ್ ಸ್ಕೂಲನ್ನು ನಡೆಸುತ್ತಿದ್ದಾರೆ.
ಶೋಷಿತ ಹೆಣ್ಣುಮಕ್ಕಳ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ‘ಅಲ್ ಹುದ್ ವಿಮೆನ್ಸ್ ವೆಲ್ ಫೇರ್ ಸೊಸೈಟಿ’ ಸ್ಥಾಪಿಸಿದ್ದಾರೆ. ಗ್ಯಾರೇಜನಲ್ಲಿ ದುಡಿಯುವ ಹಾಗೂ ಕೊಳೆಗೇರಿ ಮಕ್ಕಳ ಬಗ್ಗೆ ವಿಶೇಷ ಆಸ್ಥೆ ವಹಿಸಿ ಅವರಿಗೆ ಉಚಿತ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ಬಾಲಕಾರ್ಮಿಕ ಪದ್ಧತಿಗಳ ವಿರುದ್ಧ ಪ್ರಬಲವಾಗಿ ಧ್ವನಿಯೆತ್ತಿ ಹೋರಾಡುತ್ತಿರುವ ಅಪರೂಪದ ವಿದ್ಯಾವಂತ ಮುಸ್ಲಿಂ ಮಹಿಳೆ ಶ್ರೀಮತಿ ಫರೀದಾ ರಹಮತುಲ್ಲಾ ಖಾನ್