Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಾ. ಸುಮಾ ಸುಧೀಂದ್ರ

ಸುಪ್ರಸಿದ್ಧ ವೀಣಾ ವಿದ್ವಾಂಸರಾದ ಎಲ್ ರಾಜಾರಾವ್, ಚಿಟ್ಟಿಬಾಬು, ಎಚ್ ವಿ ಕೃಷ್ಣಮೂರ್ತಿ, ಎಂ ಎ ನರಸಿಂಹಾಚಾರ್ ಅವರ ಶಿಷ್ಯ ಡಾ. ಸುಮಾ ಸುಧೀಂದ್ರ ಅವರು ಇಂದು ನಾಡಿನ ಹಾಗೂ ರಾಷ್ಟ್ರದ ಅಗ್ರಪಂಕ್ತಿಯ ಕಲಾವಿದರಲ್ಲಿ ಒಬ್ಬರು. ಬೆಂಗಳೂರಿನಲ್ಲಿ ೧೯೫೨ರಲ್ಲಿ ಜನಿಸಿದ ಡಾ. ಸುಮಾ ಸ್ನಾತಕೋತ್ತರ ಪದವಿಯ ಜೊತೆಗೆ ವೀಣಾ ಶಿಕ್ಷಣ ಪಡೆದು ವಿದ್ವತ್

ಪರೀಕ್ಷೆಯಲ್ಲಿ ದ್ವಿತೀಯ ಬ್ಯಾಂಕ್ ಗಳಿಸಿ ಈಗ ಕನ್ನಡ ನಾಡಿನ ಶ್ರೇಷ್ಠ : ಪರಂಪರೆಯೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಿರುವ ಇವರು ಕರ್ನಾಟಕದಾದ್ಯಂತ ಹಾಗೂ ಚೆನ್ನೈ, ಮುಂಬೈ, ದೆಹಲಿ, ಔರಂಗಾಬಾದ್ ಮುಂತಾದೆಡೆಗಳಲ್ಲಿ ವೀಣಾವಾದನ ಕಚೇರಿ ನೀಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಮೆರಿಕ, ಸಿಂಗಪುರ್, ಮಲೇಶಿಯಾ ಹಾಗೂ ಇಂಗ್ಲೆಂಡ್ ರಾಷ್ಟ್ರಗಳಲ್ಲಿ ತಮ್ಮ ಕಲೆಯ ಕಂಪನ್ನು ಹರಿಸಿ ನಾಡಿಗೆ ಹೆಮ್ಮೆ ತಂದಿದ್ದಾರೆ.

ಡಾ. ಸುಮಾ ಸುಧೀಂದ್ರ ಅವರು ಪ್ರಾಧ್ಯಾಪಕರಾಗಿ, ಸಂಘಟಕರಾಗಿ, ವೀಣಾವಾದನ ಕಲಾವಿದೆಯಾಗಿ, ಸಂಗೀತ ಸಂಯೋಜಕಿಯಾಗಿ, ಆಡಳಿತಗಾರರಾಗಿ, ತಮ್ಮ ಸ್ಟಿಂಗ್ ಇನ್ಸ್‌ಟ್ರುಮೆಂಟ್ಸ್’ ಮಹಾಪ್ರಬಂಧಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಬಹುಮುಖ ಪ್ರತಿಭೆಯುಳ್ಳ ಇವರ ಕಲಾ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅತ್ಯುತ್ತಮ ವೈಣಿಕ ಪ್ರಶಸ್ತಿ ಗಾನಕಲಾಶ್ರೀ ಬಿರುದು, ವೈಣಿಕ ಕಲಾಭೂಷಣೆ, ತಮಿಳುನಾಡು ಸರ್ಕಾರದ ‘ಕಲೈಮಾಮಣಿ’ ಮುಂತಾದವು.