Categories
ಬಯಲಾಟ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ದ್ಯಾಮ್ಲಪ್ಪ ಜಾಂಪ್ಲೆಪ್ಪ ಲಮಾಣಿ

ನಾಲ್ಕು ದಶಕಗಳಿಂದ ದೊಡ್ಡಾಟದ ಕತೆಗಾರರಾಗಿ, ಕಲಾವಿದರಾಗಿ ನಿರ್ದೇಶಕರಾಗಿ, ದುಡಿಯುತ್ತಿರುವ ದ್ಯಾಮ್ಲಪ್ಪ ಜಾಂಗ್ಲಪ್ಪ ಲಮಾಣಿ ಅವರು ಹಲವಾರು ಪೌರಾಣಿಕ ಪ್ರಸಂಗಗಳನ್ನು ಬಯಲಾಟದಲ್ಲಿ ಅಳವಡಿಸಿದ್ದಾರೆ.
ರಾಮಾಯಣ, ಕುರುಕ್ಷೇತ್ರ, ಮೂರೂವರೆ ವಜ್ರಗಳು, ಇಂದ್ರಜೀತು ಕಾಳಗ, ಮಹೀರಾವಣ ದೊಡ್ಡಾಟ ಪ್ರಸಂಗಗಳು ದ್ಯಾಮ್ಲಪ್ಪ ಅವರಿಗೆ ಹೆಸರು ತಂದುಕೊಟ್ಟ ಮಹತ್ವದ ಪ್ರದರ್ಶನಗಳು.
ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ ಸನ್ಮಾನಗಳು ದ್ಯಾಮಪ್ಪ ಜಾಂಗ್ಲಪ್ಪ ಲಮಾಣಿ ಅವರಿಗೆ ಲಭಿಸಿವೆ.