Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ತುಳಸಮ್ಮ ಕೆಲೂರ

ಬಡ ಮತ್ತು ಅನಾಥ ಮಕ್ಕಳನ್ನು ಸಮಾಜವು ತಿರಸ್ಕರಿಸದಂತೆ ಅವರಿಗೆ ಎಲ್ಲರಂತೆ ಶಿಕ್ಷಣ ಮತ್ತು ತರಬೇತಿ ಕೊಡಿಸಲು ಜ್ಞಾನಸಿಂಧು ಶಾಲೆ ಆರಂಭಿಸಿರುವ ತುಳಸಮ್ಮ ಅವರು ನಿರಂತರವಾಗಿ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.
ಭಿಕ್ಷೆ ಬೇಡುವ ಮಕ್ಕಳಿಗೆ ಅಕ್ಷರ ಮತ್ತು ಅನ್ನಾಹಾರಗಳನ್ನು ಒದಗಿಸುವ ಮೂಲಕ ಒಂದರಿಂದ ಆರನೆಯ ತರಗತಿವರೆಗೆ ಉಚಿತ ಶಾಲೆ ನಡೆಸುತ್ತಿದ್ದಾರೆ. ಯೋಗ, ಸಾಹಸಕ್ರೀಡೆ, ಆಧ್ಯಾತ್ಮ ಮತ್ತು ಕಂಪ್ಯೂಟರ್ ಶಿಕ್ಷಣ ನೀಡುವ ಏರ್ಪಾಡು ಮಾಡಿರುವ ತುಳಸಮ್ಮ ಅವರು ತನ್ನ ಸ್ವಂತ ಜಮೀನು ಮತ್ತು ಆದಾಯವನ್ನು ತನ್ನ ಕುಟುಂಬದ ಆದಾಯವನ್ನು ಸಮಾಜದ ಏಳಿಗೆಗಾಗಿ ತೊಡಗಿಸಿದ್ದಾರೆ.