Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಸಿ.ಎಂ. ಮುನಿಯಪ್ಪ

ಶೋಷಿತ, ದಮನಿತ ಮತ್ತು ದಲಿತ ಸಮುದಾಯವನ್ನು ಸಂಘಟಿಸಿ, ಬಿ.ಕೃಷ್ಣಪ್ಪ, ದೇವನೂರು ಮಹಾದೇವ ಮತ್ತು ಸಿದ್ದಲಿಂಗಯ್ಯ ಅವರುಗಳ ನೇತೃತ್ವದಲ್ಲಿ ನಡೆದ ದಲಿತ ಚಳುವಳಿಗಳಲ್ಲಿ ಸಂಘಟಕರಾಗಿ ದುಡಿದವರು ಸಿ.ಎಂ.ಮುನಿಯಪ್ಪ, ತರುವಾಯ ಅವರು ಎರಡು ಅವಧಿಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದವರು. ಹಾಸನ, ಚಿಕ್ಕಮಗಳೂರಿನ ಚಂಡಗೋಡು ಮತ್ತು ರಾಯಚೂರಿನ ಮಸ್ಕಿ ಜಿಲ್ಲೆಯ ಭೂಹೋರಾಟಗಳು, ಪ್ರಕರಣ ಬೆಂಡಿಗೇರಿಯಲ್ಲಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಹಾಗು ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ ಜನಜಾಗೃತಿ ಮೂಡಿಸುವ ಹೋರಾಟಗಳಲ್ಲಿ ಇವರು ಸಕ್ರಿಯರಾಗಿದ್ದವರು.
ರಾಜ್ಯ ಮಟ್ಟದ ಹಲವು ಹೋರಾಟಗಳಲ್ಲಿ ಮುಂದಿನ ತಲೆಮಾರಿನ ಯುವಕರನ್ನು ಸಂಘಟಿಸಿ ಜಾಗೃತಿಗೊಳಿಸುತ್ತಿರುವ ಸಿ.ಎಂ.ಮುನಿಯಪ್ಪ ಅವರು ನಿರಂತರವಾಗಿ ಸಾಮಾಜಿಕ ಜಾಗೃತಿಯಲ್ಲಿ ತೊಡಗಿದ್ದಾರೆ.