Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಟೀಂ ಯುವ ಬೀದರ್

ಬೀದರ್ ಜಿಲ್ಲೆಯಲ್ಲಿನ ಹಲವು ಸಮಾನ ಮನಸ್ಕ ಯುವಕರು ಒಗ್ಗೂಡಿ ರಚಿಸಿರುವ ಸಮಾಜಸೇವಾ ಸಂಘಟನೆ ಟೀಮ್ ಯುವ, ಬೀದರ್ ಜಿಲ್ಲೆಯಲ್ಲಿ ಸುಮಾರು ಹದಿನೈದನೆಯ ಶತಮಾನದಲ್ಲಿ ಆದಿಲ್ ಶಾಹಿ ನಿರ್ಮಿಸಿದ್ದ ಕರೇಜ್’ ಎಂಬ ನೀರು ಸರಬರಾಜು ವ್ಯವಸ್ಥೆಯನ್ನು ತಮ್ಮ ಶ್ರಮದಾನದಿಂದ ಮತ್ತೆ ಹುಡುಕಾಟ ನಡೆಸಿ, ಜಿಲ್ಲಾಡಳಿತದ ಅಗತ್ಯ ಸಹಕಾರ ಪಡೆದು, ಸಾಮಾಜಿಕ ಸಹಭಾಗಿತ್ವದಲ್ಲಿ ಮತ್ತೆ ಜಲಮೂಲಗಳನ್ನು ಪುನರಜೀವನಗೊಳಿಸಿದ ಶ್ರೇಯ ಇವರದು.
ಭೀಕರ ಬರಗಾಲದಲ್ಲಿ ಇವರು ಪುನರುಜ್ಜಿವನಗೊಳಿಸಿದ ಬೀದರ್ ನಗರದ ಬಾವಿಗಳಿಂದಾಗಿ ನಗರದ ಜನತೆಯ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗಿದ್ದು, ಟೀಮ್ ಯುವ ತಂಡದ ಸಾಧನೆಯ ಹೆಗ್ಗಳಿಕೆ.