Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ನಾರಾಯಣ ಢಗೆ

ಸಾಂಪ್ರದಾಯಿಕ ಸಂಗೀತ ಶಿಕ್ಷಣ ಪಡೆದು ನಾಡಿನ ಹಲವೆಡೆ ಕಚೇರಿಗಳನ್ನು ನಡೆಸಿರುವ ನಾರಾಯಣ ಢಗೆ ಅವರು ಹಾರ್ಮೋನಿಯಂ ಹಾಗೂ ಸಿತಾರ್ ವಾದನಗಳಲ್ಲಿ ಸಹ ಪರಿಶ್ರಮ ಹೊಂದಿದವರು.
ಸುಗಮ ಸಂಗೀತ ಕ್ಷೇತ್ರದಲ್ಲಿಯೂ ಹೆಸರು ಪಡೆದಿರುವ ಪಂಡಿತ್ ನಾರಾಯಣ ಢಗೆ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಗೌರವವೂ ದೊರೆತಿದೆ.
ರಾಜ್ಯದುದ್ದಕ್ಕೂ ಹಲವಾರು ಶಿಷ್ಯರನ್ನು ಪಡೆದಿರುವ ಇವರು ಹೈದರಾಬಾದ್ ಕರ್ನಾಟಕದ ಮೇರು ಗಾಯಕರಾಗಿದ್ದಾರೆ.