Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ರಾಜಪ್ರಭು ಧೋತ್ರೆ

ಆರನೆಯ ವಯಸ್ಸಿಗೆ ಸಂಗೀತಾಭ್ಯಾಸ ಆರಂಭಿಸಿದ ರಾಜಪ್ರಭು ಧೋತ್ರೆ, ಪಂಡಿತ್ ಬಿ.ವಿ.ಕಡಲಾಸ್ಕರ ಬುವಾ ಇವರಿಂದ ಶಾಸ್ತ್ರೀಯಸಂಗೀತ ಶಿಕ್ಷಣ ಪಡೆದರು. ಕರ್ನಾಟಕದ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಮೊದಲ ಬ್ಯಾಂಕ್ ಪಡೆದ ರಾಜಪ್ರಭು ಹಿಂದೂಸ್ಥಾನಿ ಸಂಗೀತದಲ್ಲಿ ಪರಿಣತರಾದರೂ ಸುಗಮ ಸಂಗೀತದಲ್ಲಿ ನೈಪುಣ್ಯತೆ ಪಡೆದವರು.

ವಚನ ಗಾಯನ, ಭಕ್ತಿಗೀತೆ, ರಂಗಗೀತೆಗಳನ್ನು ಹಾಡಬಲ್ಲ ಇವರು ಹಿಂದೂಸ್ಥಾನಿ ಹಾಗೂ ಸುಗಮ ಸಂಗೀತದಲ್ಲಿ ಆಕಾಶವಾಣಿಯ ಎ ಶೇಣಿ ಕಲಾವಿದರು.

ದೇಶದ ಹಲವು ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಕಚೇರಿ ನಡೆಸಿರುವ ರಾಜಪ್ರಭು ಅವರಿಗೆ ಮಹಾರಾಷ್ಟ್ರ ನೇಕಾರ ಸಮಾಜದ ಪುರಸ್ಕಾರ, ಬೆಳಗಾವಿಯ ಪ್ರಸಿದ್ಧ ಗಣೇಶೋತ್ಸವದ ಗೌರವಗಳು ಲಭಿಸಿದೆ.