Categories
ಯಕ್ಷಗಾನ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಬಳ್ಳೂರು ಕೃಷ್ಣ ಯಾಜಿ

ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಯಾಜಿ ಅವರು ನಾಡಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದು, ಹತ್ತು ವರ್ಷಗಳ ಹಿಂದೆ ತಮ್ಮದೇ ಆದ ಯಾಜಿ ಯಕ್ಷ ಮಿತ್ರ ಮಂಡಳಿಯನ್ನು ಸ್ಥಾಪಿಸಿದರು.

ಯಕ್ಷಗಾನ ಲೋಕದ ದಿಗ್ಗಜರೊಂದಿಗೆ ಒಡನಾಟವಿಟ್ಟುಕೊಂಡ ಯಾಜಿಯವರು ದೇಶ ವಿದೇಶಗಳಲ್ಲಿ ಮೇಳಗಳೊಂದಿಗೆ ಪ್ರವಾಸ ಮಾಡಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಮೇಳ ಮೂಲಕ ಹೊಸ ಪೀಳಿಗೆಯ ಯಕ್ಷಗಾನ ಕಲಾವಿದರನ್ನು ಸಿದ್ಧ ಮಾಡುತ್ತಿರುವ ಯಾಜಿ ಅವರಿಗೆ ಅನೇಕ ಗೌರವ ಸನ್ಮಾನಗಳು ಲಭಿಸಿದೆ.