Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಬ್ಲಿ.ಜಿ. ಮಹಾಪುರುಷ

ಬಾಗಲಕೋಟೆಯ ಬಸವೇಶ್ವರ ಕಲಾಮಹಾವಿದ್ಯಾಲಯದಲ್ಲಿ ಸಿತಾರ್ ಪ್ರಾಧ್ಯಾಪಕರಾಗಿ ಮುವ್ವತ್ತು ವರ್ಷ ಕಾಲ ಸೇವೆ ಸಲ್ಲಿಸಿದ ಪ್ರೊ. ವಿ.ಜಿ. ಮಹಾಪುರುಷ ತಮ್ಮ ಗುರು ಗಂಗಾಧರ ಸಂಗೀತ ವಿದ್ಯಾಲಯದ ಮೂಲಕ ಅನೇಕರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಬಾಗಲಕೋಟೆಯಂತಹ ಸ್ಥಳದಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಸಂಗೀತ ವಾದ್ಯಗಳ ಸಂಗ್ರಹಾಲಯವನ್ನು ಸಂಗೀತ ಕಲಾವಿದರ ಭಾವಚಿತ್ರಗಳನ್ನು ಒಳಗೊಂಡ ಕಲಾಭವನವನ್ನು ನಿರ್ಮಿಸಿರುವುದು ಇವರ ಸಂಗೀತ ಪ್ರೇಮಕ್ಕೊಂದು ಸಾಕ್ಷಿ.
ಮಹಾಪುರುಷ ಅವರು ಸಿತಾರ ದರ್ಪಣ ಎಂಬ ಕೃತಿಯನ್ನು ರಚಿಸಿದ್ದು, ನಾಡಿನ ಪ್ರಮುಖ ಉತ್ಸವಗಳಲ್ಲಿ ಸಿತಾರ್ ಕಚೇರಿಗಳನ್ನು ನೀಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.