Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಭಾರ್ಗವಿ ನಾರಾಯಣ

ಕನ್ನಡ ರಂಗಭೂಮಿ ಕಂಡ ಪ್ರತಿಭಾವಂತ ಕಲಾವಿದೆಯರಲ್ಲಿ ಭಾರ್ಗವಿ ನಾರಾಯಣ್ ಅವರದ್ದು ಅಚ್ಚಳಿಯದ ಹೆಸರು.ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ಬೆಳಗಿದ ಪ್ರತಿಭೆ.
ಜನನ.
ಬೆಂಗಳೂರು ಭಾರ್ಗವಿ ನಾರಾಯಣರ ಹುಟ್ಟೂರು. ೧೯೩೮ರ ಫೆಬ್ರವರಿ ೪ರಂದು ಡಾ.ಎಂ.ರಾಮಸ್ವಾಮಿ-ನಾಮಗಿರಿಯಮ್ಮ ದಂಪತಿಯ ಪುತ್ರಿ ಬಿಎಸ್ಸಿ ಪದವೀಧರೆ, ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ. ಇಎಸ್‌ಐ ಕಾರ್ಪೋರೇಷನ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ. ಪ್ರೌಢಶಾಲೆಯಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಮೊಳಕೆಯೊಡೆದ ಆಸಕ್ತಿ, ಶಾಲಾಕಾಲೇಜುಗಳ ನಾಟಕಗಳಲ್ಲಿ ಅಭಿನಯ, ಎರಡು ಬಾರಿ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಪ್ರಶಸ್ತಿ, ನಟನೆ ಜೊತೆಗೆ ನಿರ್ದೇಶನ, ಮಕ್ಕಳಿಗಾಗಿ ನಾಟಕ ರಚನೆ, ರಂಗಾನುಭವ ಸಿನಿಮಾ-ಕಿರುತೆರೆಗೂ ವಿಸ್ತಾರ. ನಟನೆ ಜೊತೆಗೆ ಚಿತ್ರಕಥೆ, ಸಂಭಾಷಣೆ ಬರೆದ ಹಿರಿಮೆ.ಪಲ್ಲವಿ, ಮುಯ್ಯ, ಅಂತಿಮಘಟ್ಟ, ಜಂಬೂಸವಾರಿ, ಇತ್ತೀಚಿನ ರಾಜಕುಮಾರ ಸೇರಿ ೨೨ ಚಿತ್ರಗಳಲ್ಲಿ ನಟನೆ, ಕಿರುತೆರೆಯ ಧಾರಾವಾಹಿಗಳಲ್ಲೂ ಜನಪ್ರಿಯ. ಭಾರ್ಗವಿ ನಾರಾಯಣ ಲೇಖಕಿಯೂ ಸಹ. ಅವರ ‘ನಾನು ಭಾರ್ಗವಿ’ ಅನೇಕ ಮುದ್ರಣಗಳನ್ನು ಕಂಡ ಕೃತಿ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯತ್ವ ಗೌರವ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳಿಂದ ಭೂಷಿತರು.