Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕೆ.ಜೆ. ಯೇಸುದಾಸ್

ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕರು. ತ್ಯಾಗರಾಜರು, ಪುರಂದರದಾಸರ ಕೃತಿಗಳನ್ನು ಮಾಧುರ್ಯಪೂರ್ಣವಾಗಿ ಹಾಡುವ ಸಿರಿಕಂಠದ ಇವರು ಭಾರತೀಯ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲೊಬ್ಬರು.

ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿರುವ ಇವರು ಹಿಂದಿ ಚಿತ್ರಗಳಲ್ಲಿಯೂ ಹಾಡಿದ್ದಾರೆ.

ದೇಶ ವಿದೇಶಗಳಲ್ಲಿ ವಿದ್ವತ್ತೂರ್ಣ ಸಂಗೀತ ಕಚೇರಿಗಳನ್ನು ನಿರಂತರವಾಗಿ ನಡೆಸುತ್ತಿರುವ ಕೆ.ಜೆ.ಯೇಸುದಾಸ್ ಅವರು ಅಯ್ಯಪ್ಪ ಸ್ವಾಮಿ, ಗುರುವಾಯೂರಪ್ಪ ಮತ್ತು ಕೊಲ್ಲೂರು ಮೂಕಾಂಬಿಕೆ ಭಕ್ತಿ ಗೀತ ಗಾಯನದಲ್ಲಿಯೂ ಜನಪ್ರಿಯರು.

ಕನ್ನಡ ಭಾಷೆಯಲ್ಲಿ ವಿಷ್ಣುವರ್ಧನ್, ಶಂಕರನಾಗ್ ಮೊದಲಾದ ಚಲನಚಿತ್ರ ಕಲಾವಿದರಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಯೇಸುದಾಸ್ ಅವರು ಜನಪ್ರಿಯ ಸಂಗೀತ ಸಂಯೋಜಕರು.