Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಮನೋಹರ ಕೆ ಪತ್ತಾರ

ಪರಂಪರಾನುಗತವಾಗಿ ಬಂದ ಶಿಲ್ಪಕಲೆ ಹಾಗೂ ಚಿತ್ರಕಲೆಯಲ್ಲಿ ಮೂರು ದಶಕಗಳಿಂದ ಹೆಸರಾಗಿರುವ ಮನೋಹರ ಪತ್ತಾರ ಅವರು ಕಾಲೇಜು ಚಿತ್ರಕಲಾ ಶಿಕ್ಷಕರಾಗಿಯೂ ಅನುಭವ ಪಡೆದವರು.

ಮಣ್ಣು, ಫೈಬರ್, ಸಿಮೆಂಟ್ ಸೇರಿದಂತೆ ಬಹುಮಾಧ್ಯಮ ಶಿಲ್ಪಕಲಾಕೃತಿ ರಚನೆಯಲ್ಲಿ ನೈಪುಣ್ಯತೆ ಸಾಧಿಸಿರುವ ಮನೋಹರ ಪತ್ತಾರ ಅವರು ರಂಗ ನಿರ್ದೇಶಕರಾಗಿಯೂ ಖ್ಯಾತಿ ಪಡೆದಿದ್ದಾರೆ.

ಬಹುಮುಖ ಪ್ರತಿಭೆಯ ಕಲಾವಿದರಾದ ಮನೋಹರ ಪತ್ತಾರ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ ಸಮೂಹ ವರ್ಣ ಕಾರ್ಯಾಗಾರದ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮನೋಹರ ಪತ್ತಾರ ಅವರು ಹಲವು ಪ್ರದರ್ಶನಗಳನ್ನು ಏರ್ಪಡಿಸಿದ್ದು, ಅನೇಕ ನಾಟಕಗಳಿಗೆ ರಂಗಸಜ್ಜಿಕೆಯಲ್ಲಿ ಸಹ ತೊಡಗಿದ್ದಾರೆ. ಇವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ನೀಡಿ ಸನ್ಮಾನಿಸಿದೆ.