Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸಿ. ಮಹೇಶ್ವರನ್

ಮಾಧ್ಯಮ ಲೋಕದ ವಿಶೇಷ ಪ್ರತಿಭೆ ಹಿರಿಯ ಪತ್ರಿಕೋದ್ಯಮಿ ಸಿ. ಮಹೇಶ್ವರನ್. ಶತಮಾನದ ಇತಿಹಾಸವುಳ್ಳ ‘ಸಾಫ್ಟಿ’ ಪತ್ರಿಕೆಯ ಸಂಪಾದಕರು, ಪ್ರಸಿದ್ಧ ಅಂಕಣಕಾರರೂ ಸಹ.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಸಿ. ಮಹೇಶ್ವರನ್ ಅವರು ಬಿ.ಎ. ಪದವೀಧರರು. ಬರೆವಣಿಗೆ ಆಸಕ್ತಿಯ ಕ್ಷೇತ್ರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮಾನ ಹಿಡಿತದ ವಿಶೇಷ. 1985ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ, ಪ್ರಜಾವಾಣಿ, ಸುಧಾ, ಸುದ್ದಿಸಂಗಾತಿ, ಮುಂಬಯಿನ ಪಯೋನೀ ಆಂಗ್ಲ ಪತ್ರಿಕೆಗಳ ಅಂಕಣಕಾರ. 35 ವರ್ಷಗಳ ಸುದೀರ್ಘ-ಪಕ್ವ ಅನುಭವ. ಸ್ವಾತಂತ್ರ್ಯ ಸಂಗ್ರಾಮಕ್ಕೆ ದನಿಯಾಗಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ 121 ವರ್ಷಗಳ ಇತಿಹಾಸವುಳ್ಳ ಸಾದ್ವಿ ಕನ್ನಡ ಸಂಜೆ ದಿನಪತ್ರಿಕೆಗೆ 1995ರಲ್ಲಿ ಮಾಲೀಕ-ಸಂಪಾದಕರಾಗಿ ಹೊಸ ಹೆಜ್ಜೆ. 25 ವರ್ಷಗಳಿಂದಲೂ ಪತ್ರಿಕೆ ಮುನ್ನಡೆಸಿದ ಹೆಗ್ಗಳಿಕೆ. ‘ಸಾಧಿ’ ಇನ್ಬೈಲ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ. ಸಾದ್ವಿ ಫೌಂಡೇಶನ್ ಮೂಲಕ ಹತ್ತಾರು ಸಾಮಾಜಿಕ ಕಾರ್ಯ- ಜನಜಾಗೃತಿ ಕೈಗೊಂಡ ಹಿರಿಮೆ. ಅವಿಚ್ಛಿನ್ನ ರಾಷ್ಟ್ರೀಯತೆ, ಆದರ್ಶದಿಂದಲೇ ನೆಲೆ-ಬೆಲೆ ದಕ್ಕಿಸಿಕೊಂಡ ವಿಶಿಷ್ಟ-ಮಾದರಿ ಪತ್ರಿಕೋದ್ಯಮಿ.