Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೊಹಮದ್ ಮೀರಾನ್ ಸಾಹೇಬ್

ವಿದೇಶದಲ್ಲಿದ್ದೂ ತಾಯ್ತಾಡಿನ ಸಮಾಜಸೇವೆಯಲ್ಲಿ ಅನವರತ ನಿರತರು ಮೊಹಮದ್ ಮೀರಾನ್ ಸಾಹೇಬ್. ಬಡಕುಟುಂಬಗಳ ಬಾಳು ಬೆಳಗಿದ ಹೆಮ್ಮೆಯ ಅನಿವಾಸಿ ಕನ್ನಡಿಗ
ದಕ್ಷಿಣ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಜನಿಸಿದ ಮೊಹಮದ್ ಮೀರಾನ್ ಸಾಹೇಬ್ ಶಿಕ್ಷಣದ ಬಳಿಕ ಬದುಕು ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದರು. ಅನಿವಾಸಿ ಭಾರತೀಯ ಉದ್ಯಮಿಯಾಗಿ ಛಾಪು ಮೂಡಿಸಿರುವ ಮೊಹಮದ್ ಮೀರಾನ್ ಸಾಹೇಬ್ ಅವರಿಗೆ ತಾಲ-ತಾಯ್ತುಡಿಯೆಂದರೆ ಅಪಾರ ಪ್ರೀತಿ. ವಿದೇಶದಲ್ಲಿದ್ದುಕೊಂಡೇ ತವರೂರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿರಳ ಕನ್ನಡಿಗ, ಗಲ್ಫ್ನ ಕುಂದಾಪ್ರ ಕನ್ನಡ ಬಳಗ, ಶಿರೂರು ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ನಲವತ್ತು ವರ್ಷಗಳಿಂದಲೂ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡ ನಾಡು-ನುಡಿಯ ಸೇವೆ. ಕರ್ನಾಟಕದ ಹಲವೆಡೆ ಜನಪರ ಕಾರ್ಯಕ್ರಮಗಳ ಮುಖೇನ ನೂರಾರು ಬಡಕುಟುಂಬಗಳಿಗೆ ನೆರವಾದ ದಯಾಳು. ಹುಟ್ಟೂರಿಗೆ ಆ್ಯಂಬುಲೆನ್ಸ್, ಕಸದ ವಾಹನ ಸೇರಿದಂತೆ ಹಲವು ಸೌಲಭ್ಯಗಳ ಧಾರೆಯೆರೆದಿರುವ ಸಮಾಜಸೇವಕರು.