Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ರಾಮಚಂದ್ರ ಗುಹಾ

ಅಂಕಣಕಾರರಾಗಿರುವ ರಾಮಚಂದ್ರ ಗುಹಾ ಅವರು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ತಮ್ಮ ಅಂಕಣಗಳ ಮೂಲಕ ಪರಿಸರ, ಕ್ರಿಕೆಟ್ ಮತ್ತು ರಾಜಕೀಯ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸುತ್ತಿದ್ದಾರೆ.

ತಮ್ಮ ಇಂಡಿಯಾ ಆಕ್ಟರ್ ಗಾಂಧಿ ಕೃತಿಯಲ್ಲಿ ಭಾರತೀಯ ಇತಿಹಾಸವನ್ನು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಲ್ಲಿ ರಚಿಸುವಲ್ಲಿ ಗುಹಾ ಅವರ ಕೊಡುಗೆ ಹಿರಿದು. ಕ್ರಿಕೆಟ್, ಇತಿಹಾಸ ಸೇರಿದಂತೆ ಹಲವು ಕೃತಿಗಳನ್ನು ಇವರು ರಚಿಸಿದ್ದಾರೆ.

ರಾಷ್ಟ್ರದ ಮತ್ತು ವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸ ನೀಡುತ್ತಿರುವ ರಾಮಚಂದ್ರ ಗುಹಾ ಅವರ ಹಲವು ಕೃತಿಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ.