Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ರಾಮದೇವ ರಾಕೆ

ದಲಿತ ಹೋರಾಟದ ಮಂಚೂಣಿಯಲ್ಲಿದ್ದ ರಾಮದೇವ ರಾಕೆಯವರು ಆಚಿದೋಲನ-ಪಂಚಮ ಪತ್ರಿಕೆಗಳ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದವರು.

ಪಂಚಮ ನಿಯತಕಾಲಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ರಾಮದೇವ ರಾಕೆಯವರು ನಂತರ ಪ್ರಜಾವಾಣಿ ಸಮೂಹ ಸೇರಿದರು. ವಿಶೇಷ ವರದಿ, ಶೋಧನಾ ವರದಿಗಳಲ್ಲಿ ನಿಪುಣತೆ ಸಾಧಿಸಿದ ಇವರದ್ದು ರಾಜಕೀಯ ವಿಶ್ಲೇಷಣೆಯಲ್ಲಿ ಎತ್ತಿದ ಕೈ.

ಚುನಾವಣಾ ವಿಶ್ಲೇಷಣೆ ಮಾಡುವಲ್ಲಿ ನಿಪುಣರಾದ ರಾಮದೇವ ರಾಕೆಯವರು ಗುಲಬರ್ಗಾದ ಪ್ರಜಾವಾಣಿ ಬ್ಯೂರೋದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ದಲಿತ ಸಮೂದಾಯದ ಜಾಗೃತಿಗಾಗಿ ಆರಂಭವಾದ ಕನ್ನಡದ ಪ್ರಪ್ರಥಮ ಪತ್ರಿಕೆ ‘ಪಂಚಮ’ವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖ. ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿವೆ.