Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಶಂಕರ ಬುಚಡಿ

ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ನೆಲಜಲಪರವಾದ ಹೋರಾಟಗಳಿಂದ ಮರಾಠಿ ಪ್ರಾಬಲ್ಯ ಕ್ಷೀಣಿಸುವಂತೆ ಮಾಡಿದ ವೀರಕನ್ನಡಿಗ ಶಂಕರ ಮಾಣಿಕಾ ಬುಚಡಿ. (೧೯೬೦-೭೦ರ ದಶಕದಲ್ಲಿ ಬೆಳಗಾವಿಯಲ್ಲಿದ್ದ ದ್ವೇಷಮಯ ವಾತಾವರಣವನ್ನು ತಿಳಿಗೊಳಿಸಲು ಕನ್ನಡದ ಉಳಿವಿಗಾಗಿ ಕನ್ನಡ ಗೆಳೆಯರ ಬಳಗ ಸ್ಥಾಪಿಸಿ ಚಳವಳಿಯ ಮುಂಚೂಣಿ ನಾಯಕರಾಗಿ ಕನ್ನಡ ಸೇವೆಗೈದವರು. ಕನ್ನಡ ವಾಚಾನಾಲಯ ತೆರೆದವರು, ರಸ್ತೆನಾಮಫಲಕಗಳನ್ನು ಕನ್ನಡಜಾರಿಗೆ ಶ್ರಮಿಸಿದವರು, ಕನ್ನಡ ಚಳವಳಿಗಾರರ ಸಂಘದ ಮೂಲಕ ಕನ್ನಡದಕಹಳೆ ಮೊಳಗಿಸಿದವರು. ಮಹಾಜನ್‌ ವರದಿ ಜಾರಿಗಾಗಿ ಹೋರಾಡಿದ ಶಂಕರ್ ಬುಚಡಿ ನೇಕಾರರ ಸಂಘದ ಮೂಲಕ ಸಮುದಾಯದ ಸೇವೆಗೈದವರು. ಗಾಯಿತ್ರಿ ಅರ್ಬನ್ ಸೊಸೈಟಿ ತೆರೆದು ಜನಾಂಗದ ಆರ್ಥಿಕಾಭಿವೃದ್ಧಿಗೆ ನೀರೆರೆದವರು. ಹಲವು ಕೃತಿಗಳ ಲೇಖಕರು, ಹವ್ಯಾಸಿ ಬರಹಗಾರರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ದೇವರದಾಸಿಮಯ್ಯ ಅಧ್ಯಯನ ಪೀಠದ ಸಂಪಾದಕ ಮಂಡಲ ಸದಸ್ಯರಾಗಿ ಗುರುತರ ಸೇವೆಗೈದವರು. ಜೈಲುವಾಸ ಅನುಭವಿಸಿದ ಅಪ್ರತಿಮ ಚಳವಳಿಗಾರರು. ದಶಕಗಳ ಕಾಲ ಕನ್ನಡದ ಗೇಯತೆ ಮೆರೆಯಲು ಅಹರ್ನಿಶಿ ದುಡಿದ ಬುಚಡಿ ಅವರು ಕನ್ನಡನುಡಿ ಶ್ರೀ ಪ್ರಶಸ್ತಿ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ನೇಕಾರರತ್ನ ಪ್ರಶಸ್ತಿ, ಪ್ರತಿಭಾರತ್ನ ಪ್ರಶಸ್ತಿ ಮುಂತಾದ ಗೌರವಗಳಿಂದ ಭೂಷಿತರು. ೮೦ರ ಇಳಿವಯಸ್ಸಿನಲ್ಲೂ ಕನ್ನಡಸೇವೆಗೆ ಮುಂದಾಗುವ ಅಪ್ಪಟ ಕನ್ನಡಪ್ರೇಮಿ.