Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿಠಪ್ಪ ಗೋರಂಟ್ಲಿ

ಪತ್ರಕರ್ತರಾಗಿ ಹಾಗೂ ಸಾಹಿತಿಗಳಾಗಿ ಹೆಸರಾಗಿರುವ ವಿಠಪ್ಪ ಗೋರಂಟ್ಲಿ ಅವರು ಲಂಕೇಶ್‌ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದವರು.

ಕೊಪ್ಪಳ ಪ್ರದೇಶದಲ್ಲಿ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠಪ್ಪ ಗೋರಂಟ್ಲಿ ಅನೇಕ ದೈನಿಕ ಹಾಗೂ ನಿಯತಕಾಲಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾವ್ಯ, ಕತೆ, ಜೀವನಚರಿತ್ರೆ ಹಾಗೂ ಅಂಕಣ ಬರೆಹಗಳ ಬಗ್ಗೆ ಅನೇಕ ಕೃತಿಗಳನ್ನು ಹೊರತಂದಿರುವ ಇವರು ಅನೇಕ ಜನಪರ ಹೋರಾಟಗಳಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ತನಿಖಾ ವರದಿ ಪ್ರಶಸ್ತಿಯು ೨೦೦೩ರಲ್ಲಿ ಲಭಿಸಿದೆ.